ಪುತ್ತೂರು(www.vknews.in): ಭಾರತದ ಸಂವಿಧಾನದಲ್ಲಿ ಪವಿತ್ರ ಸ್ಥಾನವನ್ನು ಹೊಂದಿರುವ ಮಹಿಳೆಯರ ಹಾಗೂ ಮಕ್ಕಳ ಮೇಲಿನ ಸತತ ಅತ್ಯಾಚಾರ ಪ್ರಕರಣಗಳಿಂದಾಗಿ ವಿಶ್ವಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಸಿರಾಜುಲ್ ಹುದಾ ಜುಮ್ಮಾ ಮಸೀದಿಯ ಖತೀಬರಾದ ಕೆ.ವಿ.ಮಜೀದ್ ದಾರಿಮಿಯವರು ಹೇಳಿದ್ದಾರೆ.
ಶುಕ್ರವಾರ ಜುಮುಅಃ ಪ್ರಾರ್ಥನೆಯ ನಂತರ ಮಾತನಾಡಿದ ಅವರು ‘ ಒಂದು ಕಡೆ ಅತ್ಯಚಾರಿಗಳ ಅಮಾನವೀಯ ಕಾಮದಾಟಕ್ಕೆ ಬಲಿಯಾಗಿ ಅದೆಷ್ಟೋ ಹದಿ ಹರೆಯದ ಯುವತಿಯರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ದೇಶದಲ್ಲಿ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿದ್ದರೂ ಕಾನೂನುಗಳು ಜಾರಿಯಾಗುತ್ತದೆ ವಿನಾಃ ಅನುಷ್ಠಾನಕ್ಕೆ ಬರುವುದಿಲ್ಲ. ಇದರಿಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ’ ಎಂದರು.
ದೇಶದಲ್ಲೆಡೆ ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಫ್ಯಾಶಿಸ್ಟ್ ಶಕ್ತಿಗಳು ಇತಿಹಾಸವನ್ನು ತಿರುಚಲು ಹೊರಟಿದ್ದು, ಶಾಲಾ ಪಠ್ಯ ಪುಸ್ತಕದಲ್ಲಿ ವಿಷವನ್ನು ತುಂಬಿಸುವ ಮೂಲಕ ಜಾತ್ಯಾತೀತ ರಾಷ್ಟ್ರ ಭಾರತದ ಮಕ್ಕಳ ಮನಸ್ಸಿನಲ್ಲಿಯೂ ಕೋಮು ಭಾವನೆಯನ್ನು ಭರಿಸುವಂತಹ ಷಡ್ಯಂತ್ರ ಮಾಡುತ್ತಿದೆ. ಇದರ ವಿರುದ್ಧ ದ್ವನಿ ಎತ್ತಬೇಕಾದದ್ದು ಭಾರತ ಪ್ರಜೆಗಳ ಕರ್ತವ್ಯ ವಾಗಿದೆ ಎಂದು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.