(www.vknews.in)ಬಂಟ್ವಾಳ: ಪುಣಚ ಗ್ರಾಮದ ಆಜೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಎಸ್ಡಿಎಂಸಿ ಸಮನ್ವಯ ವೇದಿಕೆಯ ಬಂಟ್ವಾಳ ತಾಲೂಕಿನ ಸಂಘಟನಾ ಕಾರ್ಯದರ್ಶಿ ವೆಂಕಟ್ರಮಣ ಪುಣಚ, ಉಪಾಧ್ಯಕ್ಷರಾಗಿ ಆರ್ ಭವಾನಿ ಜನಾರ್ಧನ ನಾಯ್ಕ ಹಳೆಹಿತ್ಲುರವರುಗಳನ್ನು ಶಾಲೆಯ ಪೋಷಕರ ಪ್ರತಿನಿಧಿಗಳು ಆಯ್ಕೆ ಮಾಡಿದ್ದಾರೆ.
ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರ ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಪುಣಚ ಗ್ರಾಮ ಪಂಚಾಯತ್ ಕಾರ್ಯದರ್ಶಿ ರಾಮ ನಾಯ್ಕ.ಎ, ಸದಸ್ಯರಾದ ರೇಖಾ ಮಾಯಿಲ ಮೂಲೆ ಉಪಸ್ಥಿತರಿದ್ದರು.
ನೂತನ ಸಮಿತಿ ವೆಂಕಟರಮಣ ಪುಣಚ ಅಧ್ಯಕ್ಷರು,, ಭವಾನಿ ಯು ಆರ್ ಉಪಾಧ್ಯಕ್ಷರು,
ಕಾರ್ಯಕಾರಿ ಸಮಿತಿ ಸದಸ್ಯರು. ರಮೇಶ್ಚಂದ್ರ ಪ್ರಭು, ದೇವಪ್ಪನಾಯ್ಕ,ಜಯಮಾಲ, ಶ್ಯಾಮಲ, ಶಾಂತಿ, ನಳಿನಿ,ಪೂರ್ಣಿಮಾ,ಹರಿಣಾಕ್ಷಿ,ಶರ್ಮಿಳಾ, ಚಂದ್ರಶೇಖರ ಕೆ.ಸವಿತಾ,ಕಾವೇರಿ,ಮಲ್ಲಿಕಾ ,ಪುಷ್ಪಲತಾ,ಹೇಮಾವತಿ ,ಗೀತಾ.
ಪದನಿಮಿತ್ತ ಸದಸ್ಯರಾಗಿ ಮುಖ್ಯಶಿಕ್ಷಕಿ ಬಿ.ವಿ. ಸೀತಾಲಕ್ಷ್ಮಿ ಆಶಾ ಕಾರ್ಯಕರ್ತೆ ಪುಷ್ಪಾವತಿ, ಅಂಗನವಾಡಿಯ ಪ್ರತಿನಿಧಿಯಾಗಿ ವೀಣಾ , ನಾಮ ನಿರ್ದೇಶಿತ ಸದಸ್ಯರಾಗಿ ಸ್ಥಳೀಯ ಜನ ಪ್ರತಿನಿಧಿ ರೇಖಾ ಹಾಗೂ ಸಹ ಶಿಕ್ಷಕ ಸುರೇಶ್ ಕುಮಾರ್ ರವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು .
ಮುಖ್ಯ ಶಿಕ್ಷಕಿ ಬಿ.ವಿ. ಸೀತಾಲಕ್ಷ್ಮಿ ಸ್ವಾಗತಿಸಿ, ಸಹಶಿಕ್ಷಕ ಸುರೇಶ್ ನಾಯಕ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.