ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಭಾರತೀಯ ಜನತಾ ಪಾರ್ಟಿ ರಾಜ್ಯ ಫಲಾನುಭಾವಿಗಳ ಪ್ರಕೋಷ್ಟ ಮಾಲೂರು, ಇವರ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನದ ಶಿರ್ಷಿಕೆಯ ಅಡಿಯಲ್ಲಿ ಭಾರತದ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ 71 ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ವನ್ನು ಮಾಲೂರಿನ ವೈಟ್ ಗಾರ್ಡನ್ ಸಮೀಪದ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಭಾರತೀಯ ಜನತಾ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಕೇಶವ ಪ್ರಸಾದ್ ರವರು ಮಾತನಾಡಿ “ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿರುವ ಮಾಲೂರು ತಾಲ್ಲೂಕಿನ ಎಲ್ಲಾ ಬಿಜೆಪಿ ಮುಖಂಡರಿಗೆ ಅಭಿನಂದನೆ ಎಂದರು ಹಾಗೇ ಪ್ರಧಾನಿ ನರೇಂದ್ರ ಮೋದಿ ರವರ ಸಾಧನೆಗಳ ಹಾದಿಯನ್ನು ಮೇಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ, ಬಿ.ಜೆ.ಪಿ ಮುಖಂಡ ಹೂಡಿ ವಿಜಯ್ ಕುಮಾರ್ ರವರು ಮಾತನಾಡಿ “ನಿರಂತರವಾದ ಅತಿ ಹೆಚ್ಚು ಪರಿಶ್ರಮ, ಕಾರ್ಯಕರ್ತರ ಸಹಕಾರ, ತಾಲ್ಲೂಕಿನ ಯುವಜನಾಂಗದ ಬೆಂಬಲ, ಇವೆಲ್ಲಾ ಸೇರಿ ಇಂದು 1037 ಯೂನಿಟ್ ಗಳಷ್ಟು ರಕ್ತದ ಸಂಗ್ರಹವಾಗುವ ಮೂಲಕ ದಾಖಲೆ ಮಾಡಿದ್ದೀವಿ ಇದಕ್ಕೆ ಸಹಕರಿಸಿದ ಪಕ್ಷದ ಪದಾಧಿಕಾರಿಗಳು, ಕಾರ್ಯರ್ತರಿಗೆ ಧನ್ಯವಾದಗಳು ತಿಳಿಸಿದರು.
ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ 1037 ಯೂನಿಗಳಷ್ಟು ರಕ್ತವನ್ನು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಬೆಂಗಳೂರು ಇವರಿಗೆ ಸಮರ್ಪಿಸಲಾಯಿತು
ಕಾರ್ಯಕ್ರಮದಲ್ಲಿ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷರಾದ ಪುರ ನಾರಯಣಸ್ವಾಮಿ, ಆರ್, ಪ್ರಭಾಮ ಜಿಲ್ಲಾ ಪ್ರಧಾನ ಪದ್ಮಾವತಿ, ಗುರುನಾಥರೆಡ್ಡಿ, ಸಿ.ಜಿ. ಹರೀಶ್ ಗೌಡ, ಭಾನು ತೇಜಾ, ಅಮರಾವತಿ, ಸತೀಶ್ ಆರಾಧ್ಯ, ರಾಮಮೂರ್ತಿ. ಎಂ. ಅಂಬರೀಶ್ ರೆಡ್ಡಿ, ಹಾಗೂ ಬಿಜೆಪಿ ಮಾಲೂರು ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.