(www.vknews.com) : ಟಿ ಎಂ ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟು ಹಬ್ಬದ ಪ್ರಯುಕ್ತ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ( ರಿ) ಅರಂತೋಡು ಇದರ ವತಿಯಿಂದ ಗೂನಡ್ಕದ ದರ್ಖಾಸ್ ನಲ್ಲಿ ನಿರ್ಮಿಸುತ್ತಿರುವ ಜಾಫರ್ ತೆಕ್ಕಿಲ್ ರವರ ಮನೆ ನಿರ್ಮಾಣ ಕಾರ್ಯಕ್ಕೆ ಮೊದಲ ಕಂತಿನ 50 ಸಾವಿರ ರುಪಾಯಿ ಸಹಾಯಧನವನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಗೂನಡ್ಕ ಇದರ ವ್ಯವಸ್ಥಾಪಕ ಸಿಯಾದ್ ಜಯನಗರ ಉಪಸ್ಥಿತರಿದ್ದರು.
ಟಿ ಎಂ ಶಹೀದ್ ತೆಕ್ಕಿಲ್ ರವರ 50ನೇ ಹುಟ್ಟು ಹಬ್ಬದ ವರ್ಷಾಚರಣೆಯ ಪ್ರಯುಕ್ತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ರೋಗಿಗಳಿಗೆ, ಮನೆ ದೂರಸ್ತಿಗೆ, ಬಡ ಹೆಣ್ಣು ಮಕ್ಕಳ ಮದುವೆಗೆ, ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಹೀಗೆ ಒಟ್ಟು ರೂ. 17 ಲಕ್ಷದ 50 ಸಾವಿರದಷ್ಟು ಧನ ಸಹಾಯವನ್ನು ನೀದಿರುತ್ತಾರೆ ಎಂದು ಟಿ ಎಂ ಶಹೀದ್ ತೆಕ್ಕಿಲ್ ಸುವರ್ಣ ಸಂಭ್ರಮ ಅಭಿನಂದನ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗು ಕಾರ್ಯದರ್ಶಿ ಕೆ ಟಿ ವಿಶ್ವನಾಥ್ ತಿಳಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.