ಕೋಲಾರ (ವಿಶ್ವಕನ್ನಡಿಗ ನ್ಯೂಸ್) :ಕರ್ನಾಟಕ ಹಾಡು ಕಲಾವಿದರ ವೇದಿಕೆ ವತಿಯಿಂದ ವಾಟ್ಸ್ ಆಫ್ ಕರ್ನಾಟಕ 2021 , ಸೀಸನ್ ರ ರಾಜ್ಯಮಟ್ಟದ ಗಾಯನ ಸ್ಪರ್ಧೆಯನ್ನು ಬೆಂಗಳೂರಿನ ಜಯನಗರ 8 ನೇ ಕ್ರಾಸ್ನಲ್ಲಿರುವ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ಅಕ್ಟೋಬರ್ 10 ರಂದು ಭಾನುವಾರ ಬೆಳಿಗ್ಗೆ 10-00 ರಿಂದ ಸಂಜೆ 7-00 ಗಂಟೆಯವರೆಗೆ ಸ್ಪರ್ಧಾರ್ಥಿಗಳ ಆಡಿಷನ್ ಮತ್ತು ಪೈನಲ್ ಇರುತ್ತದೆ. ಕರೋಕೆ ಗಾಯನದ ಮೂಲಕ ಸಹ ಹಾಡಲು ಅವಕಾಶವಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೇವಲ ಕನ್ನಡ ಗೀತೆಗಳನ್ನು ಹಾಡಲು ಮಾತ್ರ ಅವಕಾಶ ಕಲ್ಪಿಸಲಾಗುವುದು. ಗಾಯಕ / ಗಾಯಕಿಯರು ತಪ್ಪದೇ ಒಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ತರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ . ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 15,000 / ದ್ವಿತೀಯ ಬಹುಮಾನ 10,000 / ತೃತೀಯ ಬಹುಮಾನ 5,000 / ನಗದು ಜೊತೆಗೆ ಟ್ರೋಫಿ ಸಹ ನೀಡಲಾಗುವುದು. ವಿಶೇಷ ಉಡುಗೊರೆಯಾಗಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಅವರು ಹಾಡಿದ ವೀಡಿಯೋ ಕ್ಲಿಪ್ , ನೆನಪಿನ ಕಾಣಿಕೆ , ಪ್ರಮಾಣ ಪತ್ರ ನೀಡಲಾಗುವುದು . ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾಗವಹಿಸುವ ಸೆಪ್ಟೆಂಬರ್ 30 ರೊಳಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹಾಡು ಕಲಾವಿದರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೋಲಾರ ಶ್ರೀನಿವಾಸ್ ಮೊ . 9164686069 , 9686532687 , , 8904220086 , 9880777761 ಸಂಪರ್ಕಿಸಲು ಕೋರಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.