ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ):ವಿವಿಧ ಕಲಾಕ್ರತಿಗಳನ್ನು ನಿರ್ಮಿಸಿ ಅತೀ ಚಿಕ್ಕ ವಯಸ್ಸಿನಲ್ಲೇ ಮನೆ ಮಾತಾದ ತಾಲೂಕಿನ ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ ಸಿದ್ದಾರ್ಥ್ ಜನ್ಸಾಲೆಗೆ ಬೆಂಗಳೂರಿನಲ್ಲಿ ಸೆಲೆಬ್ರಿಟಿ ಒಬ್ಬರಿಂದ ಅದ್ದೂರಿಯ ಅಭಿನಂದನೆ ಪ್ರಾಪ್ತವಾಗಿದೆ.
ಅತೀ ಕಿರಿಯ ವಯಸ್ಸಿನಲ್ಲೇ ತನ್ನ ಪ್ರತಿಭೆಯಿಂದ ಪರಿಚಿತವಾದ ಕುಂದಾಪುರದ ಜನ್ಸಾಲೆಯವರಾದ ಸಿದ್ದಾರ್ಥ್ ಗೆ ಅಭಿನಂದನೆ , ಸನ್ಮಾನ ,ಗೌರವ ಹೊಸತಲ್ಲ.
ಅಂತೆಯೇ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬುಲಾವ್ ಬಂದಿತ್ತು. ಹೌದು ! ನಟ -ನಿರೂಪಕ ಸೃಜನ್ ಲೋಕೇಶ್ ಅವರಿಂದ ಅಭಿನಂದನೆಗೆ ಒಳಗಾಗಿದ್ದಾನೆ. ಪ್ರಸ್ತುತ ಸೃಜನ್ ಲೋಕೇಶ್ ನಡೆಯಿಸಿ ಕೊಡುತ್ತಿರುವ ‘ಮಜಾ ಟಾಕೀಸ್ ‘ನ ಸ್ಟುಡಿಯೋದ ಕಲಾಕ್ರತಿಯನ್ನು ನಿರ್ಮಿಸಿ ಹಸ್ತಾಂತರಿಸಿದ್ದರು. ಇದನ್ನು ಮೆಚ್ಚಿ, ಹೆಮ್ಮೆಯಿಂದ ಕೊಂಡಾಡಿದ್ದೂ,ಅಭಿನಂದನೆ ಜೊತೆಗೆ ಶುಭ ಹಾರೈಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.