ಮಂಗಳೂರು (www.vknews.com) : ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ವತಿಯಿಂದ ನೂರುಲ್ ಉಲೂಮ್ ಮದ್ರಸದಲ್ಲಿ 19-09-2021 ಆದಿತ್ಯವಾರ ಮುಅಲ್ಲಿಮ್ ಡೇ ಕಾರ್ಯಕ್ರಮ ಜಮಾಅತ್ ಉಪಾಧ್ಯಕ್ಷರಾದ ಎಂ.ಡಿ.ಅಬ್ದುಲ್ ಕರೀಮ್ ದೆಮ್ಮಲೆ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಖತೀಬರಾದ ಮುಹಮ್ಮದ್ ಸಲೀಂ ಅರ್ಶದಿ ಸಭೆಯನ್ನು ಉದ್ಘಾಟಿಸಿದರು.
ಇಸ್ಮಾಯಿಲ್ ಅಝ್ ಹರಿ ಹಾಗೂ ಅಹ್ಮದ್ ಮುಸ್ಲಿಯಾರ್ ಆಶಂಸಾ ಭಾಷಣಗೈದರು. ಉಸ್ತಾದ್ ಸ್ವದಕತುಲ್ಲಾ ಫೈಝಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಹ್ ಳೀಮ್ ತರಗತಿ ನಡೆಸಿದರು. ಸಭೆಯಲ್ಲಿ SKSBV OLD students ನೂತನ ಪದಾಧಿಕಾರಿಗಳ ಪ್ರಮಾಣವಚನ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷರಾದ ಟಿ.ಹೆಚ್.ಅಬ್ದುಲ್ ರಹಿಮಾನ್, ಎಂ.ಕೆ.ಯೂಸುಪ್ ಬದ್ರಿಯಾನಗರ, ಮಾಜಿ ಉಪಾಧ್ಯಕ್ಷರಾದ ಡಿ.ಅಹಮ್ಮದ್ ಆಲಿಯಬ್ಬ, ಉಪಾಧ್ಯಕ್ಷರಾದ ಮುಹಮ್ಮದ್ ಆಸೀಫ್ ದೆಮ್ಮಲೆ, ಉಪ ಕಾರ್ಯದರ್ಶಿ ಎಂ.ಹೆಚ್.ರಫೀಕ್ ಮಲ್ಲೂರು, ಮಾಜಿ ಪ್ರಧಾನ ಕಾರ್ಯದರ್ಶಿ ಗಳಾದ ಎಂ.ಜಿ.ಬಷೀರ್ ಗಾಣೆಮಾರ್, ಜಬ್ಬಾರ್ ಮಲ್ಲೂರು, ಸ್ಥಳೀಯರಾದ ರಹೀಂ ಪಟೇಲ್ ಬಾಗ್, ಡಿ.ಮುಹಮ್ಮದಾಲಿ, ಅಬ್ದುಲ್ ಆಲಿ, ಡಿ.ಮುಹಮ್ಮದ್ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.
ಉಪಕಾರ್ಯದರ್ಶಿ ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಬೀರ್ ಧನ್ಯವಾದ ಗೈದರು. ಈ ಸಂದರ್ಭದಲ್ಲಿ ರೇಂಜ್ ಮಟ್ಟದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.