ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ 10 ನೇ ವಾರ್ಡ್ ನಲ್ಲಿ ಪುರಸಭಾ ಸದಸ್ಯ ಭಾನುತೇಜಾ ರವರ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಡೀ ವಿಶ್ವದ್ಯಾಂತ ಆವರಿಸಿರುವ ಕರೋನಾ ಮಹಾಮಾರಿಯ ಕಷ್ಟಕರ ಸಂದರ್ಭದಲ್ಲಿ ಈ ರೀತಿಯ ಮಕ್ಕಳಿಗೆ ನಮ್ಮಿಂದಾಗುವ ಸಹಾಯ ಹಸ್ತ ಚಾಚುವುದು ಮಾನವೀಯತೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೂರಿನ ೧೦ ನೇ ವಾರ್ಡಿನ ಪುರಸಭಾ ಸದಸ್ಯರಾದ ಭಾನುತೇಜಾ ರವರು ಮಾತನಾಡಿ “ಕರೋನಾ ಸಂಕಷ್ಟದಿಂದ ಎಲ್ಲಾರೂ ಸಹ ಒಮ್ಮತದಿಂದ ಹೊರಬರಲು ಸಾಧ್ಯ ಹಾಗೇ ಇದು ಉತ್ತಮ ಸಮಯ, ನಮ್ಮ ಕೈಯಲ್ಲದ ಸಹಾಯ ಮಾಡಿದರೆ ಎಲ್ಲಾರಿಗೂ ಸಹ ಅನುಕೂಲವಾಗುತ್ತದೆ. ಇಂತಹ ಕಷ್ಟದ ಸಮಯದಲ್ಲಿ ಒಬ್ಬರ ಕಷ್ಟಕ್ಕೆ ಮತ್ತೋಬ್ಬರು ಸಹಾಯ ಹಸ್ತ ಚಾಚಿದರೆ ಎಲ್ಲಾರೂ ನೆಮ್ಮದಿಯ ಬಾಳ್ವೆ ನಡೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ” ಎಂದರು.
ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯದಲ್ಲಿ ಜೊತೆಗಿದ್ದ ನಮೋ ಬ್ರಿಗೇಡ್ ನ ವಸಂತ್, ಹಿರಿಯರಾದ ಶಂಕರಪ್ಪ, ಪವನ್ ಮೊದಲಿಯರ್ ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.