ಬೈಂದೂರು,(ವಿಶ್ವ ಕನ್ನಡಿಗ ನ್ಯೂಸ್ ): ಭಾನುವಾರ ಸೌಪರ್ಣಿಕಾ ಹೊಳೆಗೆ ಮೀನು ಹಿಡಿಯಲು ಹೋಗಿ ನೀರು ಪಾಲಾದ ಗುಜ್ಜಾಡಿ ಗ್ರಾಮದ ನಿವಾಸಿ ಮಹೇಂದ್ರ (24) ಅವರ ಮೃತದೇಹ ತಾಲ್ಲೂಕಿನ ಬಂಟ್ವಾಡಿ ಸೇತುವೆ ಬಳಿ ಸೌಪರ್ಣಿಕ ನದಿಯಲ್ಲಿ ಪತ್ತೆಯಾಗಿದೆ.
ಘಟನೆ ಹಿನ್ನಲೆ :ಭಾನುವಾರ ಸಂಜೆ 4ಗಂಟೆ ಸುಮಾರಿಗೆ ಮಹೀಂದ್ರ, ಆಶಿಕ್, ಶರತ್ ಸೌಪರ್ಣಿಕಾ ಹೊಳೆಗೆ ಮೀನು ಹಿಡಿಯಲು ಹೋಗಿ ಮಹೇಂದ್ರ ಮತ್ತು ಆಶಿಕ್ ಎನ್ನುವ ಯುವಕರಿಬ್ಬರು ಆಕಸ್ಮಿಕ ಕಾಲು ಜಾರಿ ಹೊಳೆಗೆ ಬಿದ್ದು ಮುಳುಗಿದ್ದಾರೆ. ತಕ್ಷಣ ದಡದ ಮೇಲಿದ್ದ ಸ್ನೇಹಿತ ಶರತ್ ಕೂಗಿಕೊಂಡಾಗ ಹೊಳೆ ಪಕ್ಕದಲ್ಲಿದ್ದ ಮನೆಯವರು ಘಟನಾ ಸ್ಥಳಕ್ಕೆ ಧಾವಿಸಿ ಬಂದು ದೋಣಿ ಮೂಲಕ ರತ್ನಾಕರ್ ಕಾಂಚನ್. ಅಶಿಕ್ ಎನ್ನುವ ಯುವಕನನ್ನು ರಕ್ಷಿಸಿದ್ದಾರೆ . ಅಷ್ಟರಲ್ಲೇ ಮಹೇಂದ್ರ ಎನ್ನುವ ಯುವಕ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಎನ್ನಲಾಗಿದೆ. ಸತತ 2ದಿನಗಳಿಂದ ಈಜು ತಜ್ಞ ಆಪದ್ಬಾಂಧವ ಈಶ್ವರ್ ಮಲ್ಪೆ ಹಾಗೂ ಸ್ಥಳೀಯ ಈಜು ತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಹಾಗೂ ಯುವಕರು ಹೊಳೆಯಲ್ಲಿ ಹುಡುಗಾಟ ಮಾಡಿದ್ದು ಇಂದು ಮಹೇಂದ್ರನ ಮೃತದೇಹ ಪತ್ತೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.