ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಅಂಜನಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಹಾಗೂ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪುರಸ್ಕೃತರಾದ ಡಾ.ಕಿರಣ್ ಸೋಮಣ್ಣ ರವರು ತಮ್ಮ ಹುಟ್ಟುಹಬ್ಬವನ್ನು ಬಡವರಿಗೆ ಕಂಬಳಿ ವಿತರಿಸಿ ಸರಳವಾಗಿ ಆಚರಿಸಲಾಯಿತು.
ಹುಟ್ಟುಹಬ್ಬ ಆಚರಿಸಿಕೊಂಡ ವೈದ್ಯಾಧಿಕಾರಿ ಡಾ.ಕಿರಣ್ ಸೋಮಣ್ಣ ಮಾತನಾಡುತ್ತಾ “ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ನಿರ್ಗತಿಕರಿಗೆ ಚಳಿಯಿಂದ ರಕ್ಷಣೆ ಪಡೆಯಲು ಕಂಬಳಿ ವಿತರಣೆ ಮಾಡುವುದರ ಮೂಲಕ ಹುಟ್ಟುಹಬ್ಬ ವಿಶೇಷತೆಯಿಂದ ಕೂಡಿರಲಿ ಎಂದು ಈ ಸೇವೆ, ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಕಾರಣ ನಿರ್ಗತಿಕರು, ಅನಾಥರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಇಂತಹ ಪರಿಸ್ಥಿತಿಯಲ್ಲಿ ಕಂಬಳಿ ಅನುಕೂಲಕ್ಕೆ ಬರುತ್ತೆ ಎಂಬ ಆಶಯದಿಂದ ವಿತರಣೆ ಮಾಡಲಾಗಿದೆ” ಎಂದರು.
ಈ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಸಮಾಜದಲ್ಲಿ ಎಲ್ಲರೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಕೆಲವು ಮಂದಿ ಭಿನ್ನ-ವಿಭಿನ್ನ ರೀತಿಯಲ್ಲಿ ಕೆಲಸಕ್ಕೆ ಬಾರದಕ್ಕೆ ದುಂದು ವೆಚ್ಚ ಮಾಡಿ ಆಚರಿಸಿಕೊಳ್ಳುವ ಬದಲು ನಿಜವಾದ ಬಡವರಿಗೆ ನೆನಪಿನಲ್ಲಿ ಉಳಿಯುವ ಸೇವೆ ಬಹಳ ಅವಶ್ಯಕ. ಇಂದು ಡಾ.ಕಿರಣ್ ಸೋಮಣ್ಣ ರವರು ಬಡವರಿಗೆ, ನಿರ್ಗತಿಕರಿಗೆ, ಅನಾಥರಿಗೆ ಚಳಿಗಾಲದಲ್ಲಿ ಕಂಬಳಿ ವಿತರಿಸಿ ಜನುಮದಿನ ಆಚರಿಸಿಕೊಂಡಿರುವುದು ಶ್ಲಾಘನೀಯ” ಎಂದರು.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ಜಿಲ್ಲಾ ಗೌರವ ಅಧ್ಯಕ್ಷರಾದ ಮಾ.ವೆ.ಪ್ರಕಾಶ್ ಮಾತನಾಡಿ “ಭಾರತದಲ್ಲಿ ಪ್ರತಿಯೋಬ್ಬ ಪ್ರಜೆ ಉಳಿದಿಕೊಳ್ಳಲು ಸೂರು, ಉಣ್ಣಲು ಅನ್ನ, ಉಟ್ಟುಕೊಳ್ಳಲು ಬಟ್ಟೆ ಈ ಮೂರು ಮೂಲಭೂತ ಅವಶ್ಯಕತೆಯಿಂದ ಯಾರೂ ವಂಚಿತರಾಗಬಾರದು ಎಂದು ಸಂವಿಧಾನದ ಆಶಯವಿದ್ದರೂ ಅನೇಕ ನಿರ್ಗತಿಕರು ಇನ್ನೂ ಅನಾಥವಾಗಿಯೇ ನಮ್ಮ ನಡುವೆ ಇದ್ದಾರೆ, ಇಂತಹವರನ್ನು ಗುರ್ತಿಸಿ ಹುಟ್ಟುಹಬ್ಬದಲ್ಲಿ ಕಂಬಳಿ ವಿತರಣೆ ಮಾಡಿರುವುದು ಅರ್ಥಪೂರ್ಣ” ಎಂದರು.
ಕಂಬಳಿ ವಿತರಣಾ ಕಾರ್ಯದಲ್ಲಿ ಹಾಜರಿದ್ದ ಅಂಜನಿ ಮೆಡಿಕಲ್ ನ ಮಾಲೀಕರಾದ ಭರತ್, ಲಕ್ಷ್ಮಣ್, ಮೆಡಿಕಲ್ ಸಿಬ್ಬಂದಿ ವರ್ಗ, ಯುವ ಉತ್ಸಾಹಿ ರಾಮಕ್ಕ, ಡಾ.ಕಿರಣ್ ಅಭಿಮಾನಿ ಬಳಗದ ನೂರಾರು ಗೆಳೆಯರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.