(www.vknews.com) : ಲಕ್ಷದ್ವೀಪ ಮಿನಿಕೊಯ್ ದ್ವೀಪದಿಂದ ಬಹಳ ದೂರ ಇರುವ ಶ್ರೀಲಂಕಾದ ಹಡಗಿನಿಂದ 3000 ಕೋಟಿ ರೂ ವಿದೇಶಿ ಅಮಲು ಪದಾರ್ಥವನ್ನು ವಿದೇಶಿಗರಿಂದ ಹಿಡಿದುಕೊಂಡ ಸಂದರ್ಭದಲ್ಲಿ ಲಕ್ಷದ್ವೀಪದ ಎಲ್ಲ ಮುಗ್ಧಜನರನ್ನು ವಿಚಾರಣೆಗೊಳಪಡಿಸಿದ್ದರು.
ಆದರೆ ಗುಜರಾತಿನಲ್ಲಿ 21000 ಕೋಟಿ ರೂ ಮೊತ್ತದ ಬೃಹತ್ ನೋರ್ಕೋಟಿಕ್ ಪದಾರ್ಥವನ್ನು ಪತ್ತೆಹಚ್ಚಿ ಹಡಗನ್ನು ಬಂಧಿಸಿದ ಪ್ರಸ್ತುತ ಸಂದರ್ಭ ಡಿ ಆರ್ ಎ ಇತಿಹಾಸದಲ್ಲಿ ಹಿಡಿದ ಅತಿದೊಡ್ಡ ನರ್ಕೋಟಿಕ್ ಕ್ಯಾಚ್ ಆಗಿತ್ತು. ಅದೂ ಅದಾನಿಯ ಮುದ್ರೆ ಇರುವಂತಹ ಪೋರ್ಟ್ನಲ್ಲಿ ಎಂಬುವುದು ಚರ್ಚಾ ವಿಷಯ. ಬಂಧನವಾಗಿದ್ದು ಟ್ರೇಡಿಂಗ್ ಕಂಪನಿಯ ಪ್ರಮುಖ ಉದ್ಯಮಿಗಳಾದ ಸುಧಾಕರ ಹಾಗೂ ದುರ್ಗಾ ವೈಶಾಲಿಯವರು. ಅಫ್ಘಾನಿಸ್ತಾನದಿಂದ ಇರಾನ್ ಕಡಲು ಮಾರ್ಗ ಮುಖಾಂತರ ಅದಾನಿ ಪೋರ್ಟ್ಗೆ ಯಾವುದೇ ಭೀತಿ ಇಲ್ಲದೆ ಹರಿದು ಬಂದ ದೈತ್ಯಾಕಾರದ ನೋರ್ಕೋಟಿಕ್ ವಿಚಾರದ ಬಗ್ಗೆ ಚರ್ಚಿಸಲು ಪ್ರತಿಭಟಿಸಲು ಇಲ್ಲಿ ಕಾನೂನು ಹಾಗೂ ನಿಯಮ ನಿರ್ಮಾಣಗಳಿವೆಯೇ? ಒಂದು ಸಮುದಾಯಕ್ಕೆ ನಾರ್ಕೋಟಿಕ್ ಜಿಹಾದ್ ಎಂಬ ಅನೈಜ ಆರೋಪವನ್ನು ಮಾಡಿ ಕೋಮುದ್ವೇಷ ಪಸರಿಸಲು ತವಕದಲ್ಲಿ ನಿಂತ ಕೆಲವು ಧಾರ್ಮಿಕ ಮುಖಂಡರಿಗೆ ತುದಿಗಾಲಲ್ಲಿ ನಿಂತು ಬೆಂಬಲ ನೀಡಿದ ರಾಜಕಾರಣಿಗಳಿಂದ ಭಾರತ ದೇಶ ಕಂಡ ಅತಿ ದೊಡ್ಡ ನೋರ್ಕೋಟಿಕ್ ಹಂಟ್ ವಿರುದ್ಧ ಪ್ರಸ್ತಾವನೆಗಳನ್ನು ನೀಡಲು ಸಾಧ್ಯವೇ?
Adani Group Adani Foundation
✒️ ಸಹದ್ ಕರ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.