ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಪುಣ್ಯ ಕ್ಷೇತ್ರ ಚಿಕ್ಕತಿರುಪತಿ ಸಮೀಪದ ಲಕ್ಕೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೊಂದು ಅಂಬ್ಯುಲೆನ್ಸ್ ಸೇವೆ 108, ಒದಗಿಸಿ ಜನರ ಜೀವಕ್ಕೆ ಸಂಜಿವೀನಿಯಾಗಿ ಎಂದು ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯ) ಒತ್ತಾಯಿಸುತ್ತಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ರಾಜ್ಯ ಅಧ್ಯಕ್ಷ ಹಾಗೂ ಕರವೇ ಜಿಲ್ಲಾ ಉಸ್ತುವಾರಿ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಗ್ರಾಮೀಣ ಪ್ರದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಆಸ್ಪತ್ರೆಗೆ ದಾಖಲಿಸುವ ಮುನ್ನ ಪ್ರಥಮ ಚಿಕಿತ್ಸೆ ನೀಡಲು ಲಕ್ಕೂರಿನ ಆರೋಗ್ಯ ಕೇಂದ್ರಕ್ಕೆ ಆಂಬ್ಯೂಲೆನ್ಸ್ ಸೇವೆ ಅತಗತ್ಯವಾಗಿ ಬೇಕಾಗಿದೆ. ಸರಿಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಇರುವ ಈ ವ್ಯಾಪ್ತಿಗೆ ಆರೋಗ್ಯ ಇಲಾಖೆ, ಆರೋಗ್ಯ ಸಚಿವರು , ಸಂಸದರು, ಶಾಸಕರು ವಿಶೇಷ ಗಮನ ಹರಿಸುವ ಮೂಲಕ ಜನರ ಜೀವ ಉಳಿಸಲು ಸಹಾಯಕವಾಗುವ ಅಂಬ್ಯುಲೆನ್ಸ್ ಸೇವೆ ಒದಗಿಸುವ ಕಾರ್ಯಕ್ಕೆ ಗಮನಹರಿಸಿ, ಆಂಬ್ಯೂಲೆನ್ಸ ಒದಗಿಸಿ ಎಂಬುದು ನಮ್ಮ ಒತ್ತಾಯ” ಎಂದರು.
ಈ ಬಗ್ಗೆ ಮಾತನಾಡಿದ ಮಾಲೂರು ತಾಲ್ಲೂಕು ಆರೋಗ್ಯಧಿಕಾರಿಗಳಾದ ಡಾ.ಪ್ರಸನ್ನಕುಮಾರ್ ಮಾತನಾಡಿ “ಹೋಬಳಿಗೊಂದು ಆಂಬ್ಯೂಲೆನ್ಸ್ ಸೇವೆ ಜನತೆಯ ಒಳಿತಿಗಾಗಿ, ಜನರ ಜೀವದ ಉಳಿವಿಗಾಗಿ, ಅವಶ್ಯವಿದೆ ಎಂದು ನಾವು ಹಾಗೂ ತಾಲ್ಲೂಕಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ಆರೋಗ್ಯ ಇಲಾಖೆಗೆ ಮನವರಿಕೆ ಮಾಡಿದ್ದೇವೆ. ಆಂಬ್ಯೂಲೆನ್ಸ್ ಸೇವೆ ಪ್ರತಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒದಗಿಸಿದರೆ ಸಾವಿರಾರು ಜನರ ತುರ್ತು ಅಗತ್ಯತೆ ಪೂರೈಸಿ ಜೀವ ಉಳಿಸಲು ಸಾಧ್ಯವಾಗುತ್ತೆ” ಎಂದರು.
ತಾಲ್ಲೂಕಿನ ಶಾಸಕರು, ಸಂಸದರು, ಆರೋಗ್ಯ ಇಲಾಖೆ,ಆರೋಗ್ಯ ಸಚಿವರು ಗಮನ ಹರಿಸಿ ಕೂಡಲೇ ಲಕ್ಕೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯೂಲೆನ್ಸ ಸೇವೆ ಒದಗಿಸಿ ಜನರ ಪ್ರೀತಿಗೆ ಪಾತ್ರರಾಗಿ ಎಂದು ಕರವೇ ಒತ್ತಾಯಿಸಿದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.