ಕಾರ್ಕಳ, (ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಶಿರ್ಲಾಲು, ಅಜೆಕಾರು,ಕೆರ್ವಾಸೆ ಪರಿಸರದ ಮನೆಗಳ ಹಟ್ಟಿಗಳಿಂದ ಬೆಲೆಬಾಳುವ ಗೋವುಗಳನ್ನು ಕಳವು ಗೈದು ಮನೆ ಮಂದಿಗೆ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿ ಅಶಾಂತಿಯನ್ನು ಉಂಟು ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಾರ್ಯಚರಣೆಯು ತೀವ್ರಗೊಂಡಿದ್ದು,ಇದೀಗ ಮೂಡಬಿದಿರೆ ಪರಿಸರದಿಂದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆಯು ನಾಲ್ಕಕೇರಿದೆ.ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಗೋವುಗಳ ಕಳವು ಕೃತ್ಯಗಳು ಎಗ್ಗಿಲ್ಲದಂತೆ ನಡೆಯುತ್ತಿದೆ. ಇದರಲ್ಲಿ ಸ್ಥಳೀಯ ಬ್ರೋಕರ್ ಗಳು ಕೂಡ ಕೈಜೋಡಿಸಿರುವುದು ಕೃತ್ಯ ಇನ್ನಷ್ಟು ನಡೆಯಲು ಬಲ ಬಂದಂತಿದೆ. ಶಿರ್ಲಾಲು ಪ್ರಕರಣದಲ್ಲಿ ಭಾಗಿಯಾಗಿದ್ದಂತಹ ಬ್ರೋಕರ್ ಕಡ್ತಲದ ಸತೀಶ್ ನಾಯ್ಕನನ್ನು ಪೊಲೀಸರು ಬಂಧಿಸಿದ್ದು ಇದೀಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮೂಡಬಿದ್ರಿ ಗಂಟಾಲ್ಕಟ್ಟೆಯ ಪರಿಸರದ ಝಬೀರ್, ಸಲೀಮ್ ಎಂಬವರನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿರುವುದಾಗಿ ಮಾಹಿತಿ ತಿಳಿದುಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.