ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ನಗರವು ನಮ್ಮ ದೇಶದ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಯಲ್ಲಿದೆಯೆಂದು ಬೀಗುವ ನಾವು ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಉಳಿಸುವ ಬಗ್ಗೆ ಕಾಳಜಿ ಹೊಂದಬೇಕಾಗಿದೆಯೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ವಕ್ತಾರ ಎಸ್. ಎಮ್. ಮುತ್ತಲಿಬ್ ಹೇಳಿದರು.
ಮಂಗಳೂರು ನಗರದ ಅಸ್ತವ್ಯಸ್ತ ಮತ್ತು ನಗರಾಡಳಿತದ ಹಲವು ಅಲಕ್ಷ್ಯತೆಗಳನ್ನು ಬೊಟ್ಟು ಮಾಡಿದ ಅವರು, ಸ್ಮಾರ್ಟ್ ಸಿಟಿ ಹೆಸರಿನಲ್ಲೇ ಆಗೆದಿರುವ ಕೆಲವಾರು ಹೊಂಡಗಳನ್ನು ಕಾಮಗಾರಿ ಮುಗಿದರೂ ಮುಚ್ಚದೆ ಇರುವುದು ಅಥವಾ ಕೆಲವನ್ನು ಪ್ರಹಸನವೆಂಬಂತೆ ಮುಚ್ಚಿ ಅಳಿದುಳಿದ ಸಾಮಾನುಗಳನ್ನು ಅಲ್ಲೇ ಬಿಟ್ಟು ಹೋಗುವ ಗುತ್ತಿಗೆದಾರರ ಪರಿಪಾಠ ನಮ್ಮಲ್ಲಿ ಸಾಮಾನ್ಯವಾಗಿದೆ ಇದರಿಂದ ನಮ್ಮ ನಗರವು ಮೊದಲಿದ್ದ ದರ್ಜೆಗಿಂತಲೂ, ಹದಗೆಟ್ಟಿದೆ. ಇನ್ನು ಕೆಲವೆಡೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತಾವು ಹಾಕಿದ ಬ್ಯಾನರ್ ಗಳನ್ನು ನಿಗದಿತ ಸಮಯಕ್ಕೆ ತೆರವು ಮಾಡದೆ ತಿಂಗಳುಗಟ್ಟಲೆ ಹಾಗೇ ಉಳಿಸುವುದು ಮತ್ತು ಕೆಲವೊಮ್ಮೆ ಅದನ್ನು ಹಚ್ಚಿದ ಜನರು ಅಷ್ಟೊಂದು ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸದೆ ಹೆಸರಿಗೆ ಮಾತ್ರ ಅಲ್ಲಿಂದ ಬ್ಯಾನರ್ ಪೋಸ್ಟರ್ ಗಳನ್ನು ಹರಿದೆಳೆದು ಅದರ ಪಳೆಯುಳಿಕೆಗಳಾದ ಹರಿದುಳಿದವುಗಳ ಭಾಗ ಅದಕ್ಕೆ ಕಟ್ಟಿದ ಹಗ್ಗ ಇತ್ಯಾದಿಗಳೂ ಅಲ್ಲೇ ನೇತಾಡಿಕೊಂಡಿರುತ್ತದೆ.
ಉದಾಹರಣೆಗೆ, ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಹಲವು ಬಾರಿ ವಿಜೇತರಾಗಿದ್ದ ನಮ್ಮ ನೆಚ್ಚಿನ ಸಂಸದರಾದ ಆಸ್ಕರ್ ಫರ್ನಾಂಡಿಸ್ ರವರು ನಿಧನರಾದ ಎರಡು ವಾರಗಳ ನಂತರವೂ ದಿವಂಗತರ ಹೆಸರಿನಲ್ಲಿರುವ ಶೃದ್ದಾಂಜಲಿ ಬ್ಯಾನರ್ ಕಟೌಟ್ ಗಳು ಕೆಲವು ಕಡೆ ತೆರವುಗೊಳಿಸದೆ ಇನ್ನೂ ಕಾಣಬಹುದಾಗಿದೆ. ಇದೊಂದು ಸದ್ಯದ ಉದಾಹಣೆಯೆಂದಾಗಿ ಹೆಸರಿಸಿರುವುದು ಮಾತ್ರವಾಗಿದೆ. ಇಷ್ಟೊಂದು ತಪ್ಪುಗಳು ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ ತೀರಾ ಸಾಮಾನ್ಯವಾಗಿದೆ. ಇವೆಲ್ಲವುಗಳನ್ನು ನಮ್ಮ ನಗರಾಡಳಿತ ಹಗುರವಾಗಿ ಪರಿಗಣಿಸದೆ ಅದಾವ ಸಂಘಟನೆಗಳು ಇಷ್ಟೊಂದು ಬೇಜವಾಬ್ದಾರಿಯನ್ನು ಮಾಡಿದರೂ ತಕ್ಕ ಕ್ರಮ ಕೈಗೊಳ್ಳುವ ಅಥವಾ ದಂಡ ವಿಧಿಸಲು ಮುಂದಾಗಬೇಕು ಅಲ್ಲವಾದಲ್ಲಿ ಪಾಲಿಕೆಯ ವತಿಯಿಂದ ನಿಗದಿತ ಸಮಯಕ್ಕೆ ಸರಿಯಾಗಿ ತೆರವು ಕಾರ್ಯಾಚರಣೆ ನಡೆಸಬೇಕು, ಅಗತ್ಯವೆಂದಲ್ಲಿ ಅದರ ವೆಚ್ಚವನ್ನು ಭರಿಸಲು ಸಂಭದಿತ ಪಕ್ಷ, ಸಂಘಟನೆಗಳ ಮೇಲೆ ಹೊರಿಸಿ, ಅವರಿಂದ ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಿ ತಡೆಯಲು ಸಾಧ್ಯವಾಗಬೇಕು. ಹೀಗೆ ನಗರ ಪಾಲಿಕೆಯು ಇವೆಲ್ಲವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ನಮ್ಮ ನಗರದ ಸೌಂದರ್ಯವನ್ನು ಕಾಪಾಡಿಕೊಂಡಿರಲು ಪಾಲಿಕೆಯ ಜತೆ ಸಾರ್ವಜನಿಕರೂ ಸಹಕರಿಸುವ ಕಳಕಳಿಯನ್ನು ಹೊಂದಬೇಕಾಗಿದೆ ಅದೇ ರೀತಿಯಲ್ಲಿ ದುಬಾರಿ ವೆಚ್ಚದ ಸರಕಾರಿ ಕಾಮಗಾರಿಗಳ ಯೋಜನೆಗಳನ್ನು ಪಡೆಯುವ ಗುತ್ತಿಗೆದಾರರ ನಿರ್ಲಕ್ಷ್ಯತೆಯ ಬಗ್ಗೆ ಪಾಲಿಕೆಯ ಆಯುಕ್ತರು ನಿಷ್ಠುರ ನಿಲುವನ್ನು ತೋರುವ ಮೂಲಕ ನಗರದ ಸೌಂದರ್ಯ ಉಳಿಸಲು ನಾವೆಲ್ಲರೂ ಕಟಿಬದ್ದರಾಗಬೇಕಾಗಿದೆಯೆಂದವರು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.