ಕಾರ್ಕಳ ,(ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು75ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಆಮ್ಲಜನಕ ಉತ್ಪಾದನಾ ಘಟಕವನ್ನು ಸಚಿವ ವಿ ಸುನಿಲ್ ಕುಮಾರ್ ರವರು ಉದ್ಘಾಟಿಸಿದರು . ನಂತರ ಮಾತಾಡಿದ ಸಚಿವರು “ಜಿಲ್ಲೆಯಲ್ಲಿ ಪ್ರಥಮವಾದ ಆಮ್ಲಜನಕ ಉತ್ಪಾದನೆ ಘಟಕ ಇದಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಕಾಲಕಾಲಕ್ಕೆ ತಕ್ಕಂತೆ ಉನ್ನತಿಕರಣ ಗೊಳಿಸುವಂಥ ಕೆಲಸ ಈಗಾಗಲೆ ನಡೆಯುತ್ತದೆ. ಕೋರೋನಾ ಮೊದಲನೆಯ ಅಲೆ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದವರಿಗೆ ಅತ್ಯುತ್ತಮ ರೀತಿಯಲ್ಲಿ ಕೋರಂಟೈನ್ ಸಂದರ್ಭದಲ್ಲಿ ಸೇವೆಯನ್ನು ನೀಡಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನ ಕಾರ್ಕಳವಾಗಿರುತ್ತದೆ. ಎರಡನೆಯ ಅಲೆ ಸಂದರ್ಭದಲ್ಲಿ ಕಾರ್ಕಳದ ಎಲ್ಲಾ ಕಡೆ ಅತ್ಯುತ್ತಮವಾಗಿ ಲಸಿಕೆ ನೀಡುವಲ್ಲಿ ನಾವು ಸಫಲವಾಗಿದ್ದೇವೆ . ಮೂರನೇ ಅಲೆ ಬರಬಹುದಾದ ಸಂದರ್ಭದಲ್ಲಿ ಅದನ್ನು ಯಶಸ್ವಿಯಾಗಿ ತಡೆಗಟ್ಟಲು ದಾನಿಗಳ ಸಹಾಯದಿಂದ ಆಮ್ಲ ಜನಕದ ಉತ್ಪಾದನೆ ಘಟಕವನ್ನು ನಿರ್ಮಾಣ ಮಾಡಿದ್ದೇವೆ” ಎಂದು ಹೇಳಿದರು.ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು . ಈ ಸಂದರ್ಭದಲ್ಲಿ ಸಚಿವರು ದಾನಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಡಾಕ್ಟರ್ ಜಿ ಶಂಕರ್, ಸಂತೋಷ್ ಡಿಸಿಲ್ವಾ, ಕಡಾರಿ ರವೀಂದ್ರ ಪ್ರಭು, ಬೋಳ ದಾಮೋದರ್ ಕಾಮತ್, ಸುಮ ಕೇಶವ್, ಮನಿ ರಾಜ್ ಶೆಟ್ಟಿ, ರೂಪ ಶೆಟ್ಟಿ, ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಕೆ ಸುಬ್ರಹ್ಮಣ್ಯ ರಾವ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.