(www.vknews.com) : ಅಸ್ಸಾಮಿನಲ್ಲಿ ನಡೆದ ಕೃತ್ಯವನ್ನು ಇಡೀ ದೇಶವೇ ಮಾತ್ರವಲ್ಲ ಇಡೀ ವಿಶ್ವವೇ ದಿಟ್ಟಿಸಿ ನೋಡುವಂತೆ ಮಾಡಿದ್ದು ಒಬ್ಬ ವಿಕೃತ ಮನಸ್ಸಿನ ಪತ್ರಕರ್ತ. ಅನ್ಯಾಯ ಅಕ್ರಮ ಮೋಸ ವಂಚನೆ ಲಂಚ ಪ್ರಕರಣಗಳನ್ನು ಬಯಲಿಗೆಳೆದು ಜನಗಳಿಗೆ ಸತ್ಯವನ್ನು ಮುಟ್ಟಿಸಿ ಈ ನಮ್ಮ ಸುಂದರ ಭಾರತವನ್ನು ಬೆಳೆಸುವುದರಲ್ಲಿ ಉಳಿಸುವುದರಲ್ಲಿ ತನ್ನ ವರ್ಚಸ್ಸನ್ನು ತೋರಬೇಕಾಗಿದ್ದ ಒಬ್ಬ ಪತ್ರಕರ್ತ ತನ್ನ ಕರ್ತವ್ಯವನ್ನು ಮರೆತು ತಮ್ಮ ಹಕ್ಕಿಗಾಗಿ ಪ್ರತಿಭಟಿಸಿ ಪೊಲೀಸರ ಗುಂಡೇಟಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೊರಳಾಡುತ್ತಿದ್ದ ಅವನ ದೇಹದ ಮೇಲೆ ಕುಣಿದು ಸಂತೋಷಪಟ್ಟ ಇವನಂಥ ವಿಕೃತ ಮನಸ್ಸಿನ ಪತ್ರಕರ್ತ ಹಾಗೂ ಇವನಂತ ಅದೆಷ್ಟು ವಿಕೃತ ಮನಸ್ಸಿನ ಪತ್ರಕರ್ತರು ನಮ್ಮ ದೇಶಕ್ಕೆ ಮಾರಕವಾಗಿದ್ದಾರೆ.
ಅಸ್ಸಾಮಿನಲ್ಲಿ ನಡೆದ ಗೋಲಿಬಾರ್ ಆಗಲಿ ದೆಹಲಿಯ ಘಟನೆಯಾಗಲಿ, ಅಲಿಗಢ ಯೂನಿವರ್ಸಿಟಿ ಘಟನೆಯಾಗಲಿ, ಮಂಗಳೂರು ಬೆಳಗಾವಿಯಲ್ಲಿ ನಡೆದ ಗೋಲಿಬಾರ್ ಆಗಲಿ ನಮ್ಮ ದೇಶದ ಸಂವಿಧಾನವನ್ನು ನಮ್ಮ ದೇಶದ ಮಕ್ಕಳ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುತ್ತಿರುವ, ಹೊಸಕಿ ಹಾಕುತ್ತಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂದು ಬ್ರಿಟಿಷರು ಮಾಡಿದ ಅದೇ ಕೆಲಸವನ್ನು ಇಂದು ಇವರುಗಳು ಮಾಡುತ್ತಿದ್ದಾರೆ. ಎಲ್ಲೇ ಹಿಂಸಾಚಾರ ಗೋಲಿಬಾರ್ ಕೋಮುಗಲಭೆಗಳು ನಡೆಯಲಿ ಅಲ್ಲಿ ಪ್ರಮುಖವಾಗಿ ಪ್ರಯೋಜನೆ ಪಡೆದುಕೊಳ್ಳುವುದು ಕೆಲ ರಾಜಕಾರಣಿಗಳು.
ನಂತರ ಜಾತಿಯ ಹೆಸರಿನಲ್ಲಿ ಧಂದೆ ನಡೆಸುವ ನಾಯಕರುಗಳು ಎಂದು ಕರೆಸಿಕೊಳ್ಳುವ ಗೂಂಡಾಗಳಿಗೆ. ಮೂರನೆಯದು ಮನಸ್ಸಿನಲ್ಲಿ ವಿಕೃತವನ್ನು ತುಂಬಿಕೊಂಡಿರುವ ಗೋಮುಖ ವ್ಯಾಘ್ರ ಕೆಲ ಪತ್ರಕರ್ತರು, ಪೊಲೀಸರು, ಜನಸಾಮಾನ್ಯರ ಮದ್ಯದಲ್ಲಿರುವಂತಹ ಗುಂಡಗಳಿಗೆ.
“ಕಾಗೆ ಮಂಗ ಜಗಳದಲ್ಲಿ ಗುಳ್ಳೆನರಿಗೆ ಲಾಭವಾದಂತೆ.” ಇಂಥವರು ನಮ್ಮ ದೇಶಕ್ಕೆ ಮಾರಕ ಮಾತ್ರವಲ್ಲದೆ ಇವರನ್ನು ಮನುಷ್ಯರು ಎನ್ನುವುದೇ ತಪ್ಪಾದೀತು.
— ಮನ್ಸೂರ್ ಅಹ್ಮದ್ ಕೌಡಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.