(www.vknews.com) : ಪ್ರತಿಬೆ ಪ್ರೋತ್ಸಾಹ ನನ್ನ ಹಲವಾರು ಬರಹಗಳು ಈಗಾಗಲೇ ನಿಮ್ಮ ಮುಂದೆ ತಂದಿರುವೆನು.ಇದೀಗ ಮತ್ತೊಂದು ವಿಶೇಷ ಬರಹದ ಮೂಲಕ ನಮ್ಮೂರು ಮಲಾರಿನ ಯುವಕರ ಪ್ರತಿಭೆಯನ್ನು ನಿಮ್ಮ ಮುಂದಿಡಲು ಬಯಸುತ್ತಿದ್ದೇನೆ. ಪ್ರತಿಬೆ ಪ್ರೋತ್ಸಾಹ ಬರಹದಲ್ಲಿ ಈ ಹಿಂದೆ ನಾನು ಮುಹಮ್ಮದ್ ಮುಸ್ಲಿಯಾರ್ ರವರ ಬಗ್ಗೆ ಬರೆದಿರುವೆನು. ನನ್ನ ಬರಹದ ಮೂಲಕ ಮಾಹಿತಿಯನ್ನು ಪಡೆದ ರಾಜ್ಯದ ಪತ್ರಿಕೆಯೊಂದು ಮುಹಮ್ಮದ್ ಮುಸ್ಲಿಯಾರ್ ರವರನ್ನು ಬೇಟಿಯಾಗಿ ಮಾಹಿತಿ ಪಡೆದು ಅವರ ಸಾಧನೆಯನ್ನು ಪ್ರಕಟಿಸಿತ್ತು.
ಇದೀಗ ಮುಹಮ್ಮದ್ ಮುಸ್ಲಿಯಾರ್ ರವರ ಪ್ರೇರಣೆಯಿಂದ ಊರಿನ ಕೆಲವು ಯುವಕರು ಅವರ ಹಾದಿಯನ್ನೇ ಪಾಲಿಸುವ ಮೂಲಕ ನಮ್ಮಿಂದಲೂ ಸಾಧ್ಯ ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ. ಜಾಫರ್ ಟಿಪ್ಪುನಗರ ಹಾಗೂ R ಮನ್ಸೂರ್ ರವರು ಬರಡು ಭೂಮಿಯಲ್ಲಿ ಪಸಲು ತೆಗೆಯುವ ಮೂಲಕ ತಮ್ಮ ಸಾಧನೆಯನ್ನು ಮಾಡಿದ್ದಾರೆ. ಜಾಫರ್ ಟಿಪ್ಪುನಗರ ರವರ ಈ ಬಗ್ಗೆ ಕೇಳಿದಾಗ ಅವರು ಕೆಲವೊಂದು ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಮುಹಮ್ಮದ್ ಮುಸ್ಲಿಯಾರ್ ಪ್ರೇರಣೆಯಾದರೂ ಅವರು ಈ ಬಗ್ಗೆ ಹೆಚ್ಚಿನ ಸಫಲತೆಗೆ ಯೂಟ್ಯೂಬ್ ನಲ್ಲಿ ಮಾಹಿತಿ ಪಡೆದು ಹತ್ತಿರದ ಬರಡುಭೂಮಿಯಲ್ಲಿ ಉತ್ತಮ ಫಲ (ಊರಿನ ತರಕಾರಿ) ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮನ್ಸೂರ್ ರವರು ಮುಹಮ್ಮದ್ ಮುಸ್ಲಿಯಾರ್ ರವರಿಂದ ಪ್ರೇರಣೆಗೊಂಡು ಊರಿನ ತರಕಾರಿ ಬೆಳಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ತೊಂಡೆಕಾಯಿ, ಮುಳ್ಳುಸೌತೆ, ಹೀರೇಕಾಯಿ ಹಾಗೂ ಇನ್ನಿತರ ಊರಿನ ತರಕಾರಿ ಬೆಳೆದು, ಅದನ್ನು ಮಾರುವ ಮೂಲಕವೇ ಸಣ್ಣ ಆದಾಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಂದು ಪ್ರಮುಖಾಂಶವೆಂದರೆ ಇಲ್ಲಿ ಇವರಿಗೆ ಆದಾಯ ಮುಖ್ಯವಲ್ಲ, ಇದು ನಮ್ಮಿಂದ ಸಾಧ್ಯವಾಗಬೇಕು ಎಂಬ ಛಲ, ಹಾಗೂ ಮನಸ್ಸಿಗೆ ಒಂದು ಖುಷಿ ಎಂಬ ಆಶಾದಾಯಕ ಮಾತು ಇವರಿಂದ ಪಡೆಯಲು ಸಾಧ್ಯವಾಯಿತು. ತರಕಾರಿ ಬೆಳೆದು ಫಸಲು ತೆಗೆಯುವಲ್ಲಿ ಯಶಸ್ವಿಯಾದ ನಮ್ಮೂರಿನ ಯುವಕರ ಈ ಸಾಧನೆಗೆ ನಾನು ಅಭಿನಂದಿಸುವೆನು. ಪಂಚಾಯತ್ ಆಡಳಿತವು ಇಂಥಹ ಯುವಕರನ್ನು ಗುರುತಿಸಿ ಇವರಿಗೆ ಸರಕಾರದ ಪ್ರೋತ್ಸಾಹ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಎಲ್ಲಾ ಕ್ಷೇತ್ರಗಳಲ್ಲೂ ನಮ್ಮೂರು ಮಲಾರಿನ ಯುವಕರು ಬೆಳೆದುಬರಲಿ, ಸಾಧನೆ ಮಾಡಲಿ, ಎಲ್ಲರಿಗೂ ಮಾದರಿಯಾಗಲಿ ಎಂದು ಬಯಸುತ್ತೇನೆ.
✍️ ಶಮೀರ್ ಟಿಪ್ಪುನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.