ಮಂಗಳೂರು (www.vknews.com) : ಅಸ್ಸಾಂ ಹಿಂಸಾಚಾರ ಜಾತ್ಯತೀತ ಭಾರತ ದೇಶಕ್ಕೆ ಸಂವಿಧಾನ ವಿರೋಧಿಗಳು ಮಾಡಿದ ಅತಿದೊಡ್ಡ ಅಪಚಾರ ಮತ್ತು ಇಡೀ ಜಗತ್ತನ್ನು ದಿಗ್ಭ್ರಮೆ ಗೊಳಿಸಿದ ಮಹಾ ಅಪರಾಧ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಕಳವಳ ವ್ಯಕ್ತಪಡಿಸಿದ್ದಾರೆ.
ಶತ ಶತಮಾನಗಳಿಂದ ಕಾಯ್ದುಕೊಂಡು ಬಂದ ಭವ್ಯ ಭಾರತ ದೇಶದ ಮಾನವೀಯ ಐಕ್ಯತೆ ಮತ್ತು ಸೌಹಾರ್ದ ಪರಂಪರೆಗೆ ಸವಾಲೆಸೆಯುವಂತೆ ಅಸ್ಸಾಂ ನಲ್ಲಿ ಭಯಾನಕ ಮಾನವೀಯ ಮೌಲ್ಯ ಧ್ವಂಸ ರುದ್ರ ನರ್ತನ ಮಾಡಿದೆ. ಧೀರ ದೇಶಪ್ರೇಮಿಗಳಾದ ಹಿಂದೂ,ಮುಸ್ಲಿಂ ಸಮುದಾಯ ಹಲವಾರು ತ್ಯಾಗ,ಬಲಿದಾನಗಳ ಮೂಲಕ ಭದ್ರವಾಗಿ ಕಟ್ಟಿದ ಭಾರತವನ್ನು ದೇಶದ ಬಗ್ಗೆ ಕಾಳಜಿಯಿಲ್ಲದ ಸ್ವಾರ್ಥಿಗಳು ಹರಿದು ತಿನ್ನುತ್ತಿದ್ದಾರೆ. ಪೋಲಿಸರು ನಿರ್ದಯವಾಗಿ ಕೊಂದು ಹಾಕಿದ ಅಮಾಯಕ ಭಾರತೀಯ ಪೌರನ ಮೇಲೆ ಪತ್ರಕರ್ತನ ಸೋಗಿನ ದೇಶದ್ರೋಹಿ ಇಡೀ ಮನುಕುಲ ತಲೆ ತಗ್ಗಿಸುವಂತೆ ಅತ್ಯಂತ ಹೀನಾಯವಾಗಿ ವರ್ತಿಸಿದ್ದಾನೆ. ಇಂತಹಾ ಘಟನೆಗಳು ಭಾರತದ ಸಂವಿಧಾನಕ್ಕೆ ಮತ್ತು ಅತ್ಮಕ್ಕೆ ಕೊಡಲಿಯೇಟು ನೀಡಿದೆ.
ಈ ರೀತಿಯ ಮಾನವ ವಿರೋಧಿ ಕೃತ್ಯ ಮಾಡುವವರನ್ನು ಶಾಶ್ವತವಾಗಿ ಜೈಲಿಗಟ್ಟುವ ಪ್ರಬಲ ಕಾನೂನು ರೂಪಿಸದಿದ್ದರೆ ಅಕ್ರಮಿಗಳಿಗೆ ಇದೊಂದು ಕಸುಬಾಗುವ ಅಪಾಯವಿದೆ. ಆದ್ದರಿಂದ ಪ್ರಸ್ತುತ ಪ್ರಕರಣದ ಕುರಿತು ಕೇಂದ್ರ ಸರಕಾರ ತಕ್ಷಣ ಮೌನ ಮುರಿಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.