ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಹೋಂಡಾ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಿನಂಪ್ರತಿ ವ್ಯಾಯಮಕ್ಕೆ, ಆಟವನ್ನಾಡಲು ಹಿರಿಯರು, ಯುವಕರು , ಮಕ್ಕಳು ಎನ್ನದೇ ಬರುತ್ತಾರೆ. ಇತ್ತಿಚೀಗೆ ಬಿದ್ದ ಮಳೆಯ ಪರಿಣಾಮ ಹೋಂಡಾ ಕ್ರೀಡಾಂಗಣದ ಅವೈಜ್ಞಾನಿಕ ಕಾಮಗಾರಿ ಪರಿಣಾಮ ಕೆಸರು ಗದ್ದೆಯಾಗಿ ಮಾರ್ಪಟ್ಟು ಮಕ್ಕಳ ಆಟಕ್ಕೆ ಕತ್ತರಿ ಹಾಕಿರುವ ಘಟನೆ ಮಾಲೂರಿನಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿದ ಪಿ.ಸಿ.ಎಂ ಕ್ರಿಕೆಟರ್ಸ್ ತರಬೇತುದಾರರಾದ ಬಾಲಾಜಿಗೌಡ ಮಾತನಾಡಿ “ಮಾಲೂರು ಪಟ್ಟಣ್ಣದಲ್ಲಿ ನಿರ್ಮಿತವಾಗಿರುವ ಸುಸಜ್ಜಿತ ಹೋಂಡಾ ಕ್ರೀಡಾಂಗಣ ಬಹಳಷ್ಟು ಸಮಸೈಗಳ ಗೂಡಾಗಿದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ಕಿರಿಯರಿಂದ ಹಿರಿಯರವರೆಗೆ ಆಟವಾಡಲು ಬರುತ್ತಾರೆ, ಆದರೆ ಮಳೆಬಂದಾಗ ಪ್ರತಿದಿನವು ಸಹ ನಾವೇ ಮಕ್ಕಳೊಂದಿಗೆ ನಾವು ನಿಂತು ಮೈದಾನದಿಂದ ನೀರನ್ನು ಹೊರಹಾಕುವ ಕೆಲಸ ಮಾಡುವುದು ಬಹಳ ಕಷ್ಟ, ಮೈದಾನದಲ್ಲಿ ನಿಲ್ಲುವ ನೀರು ಹೊರಹೋದರೆ ನಮಗೆ ಆಟ ಆಡಲು ಬಹಳಷ್ಟು ಅನುಕೂಲಕರವಾಗುತ್ತೆ, ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಿಮ್ಮ ಗಮನ ಇತ್ತ ಹರಿಸಿ ಸಾವಿರಾರು ಜನರಿಗೆ ಅನುಕೂಲಕರವಾಗಿರುವ ಕ್ರೀಡಾಂಗಣದ ಅವ್ಯವಸ್ಥೆ ಸರಿಪಡಿಸಿ” ಎಂದರು.
ಹೋಂಡಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಬಾಲಕ ಯಶವಂತ್ ಮಾತನಾಡಿ “ಮಳೆ ಬಂದಾಗ ಸದಾ ನಾವು ನೀರನ್ನು ಎತ್ತುವ ಕೆಲಸ ಮಾಡಬೇಕಾಗಿದೆ ಇಲ್ಲಿ ಸದಾ ನೂರಾರು ಜನರು ಬಂದು ಆಟ ಆಡುತ್ತಾರೆ ಆದರೆ ಈಗ ಮಳೆ ನೀರು ಬಂದು ಕೆಸರು ತುಂಬಿರುವುದರಿಂದ ಆಟಕ್ಕೆ ಕತ್ತರಿ ಬಿದ್ದಿದೆ. ನಮಗೆ ಆಟ ಆಡಲು ನೀರು ನಿಲ್ಲದಂತೆ ಸಂಬಂಧಪಟ್ಟವರು ಗಮನಹರಿಸಿ ಸಮಸೈ ಬಗೆಹರಿಸಿಕೋಡಿ” ಎಂದರು.
ಮತ್ತೋರ್ವ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಬಾಲಕ ಜಯಷ್ಣು ಗಣೇಶ್ ಮಾತನಾಡಿ “ಹೋಂಡಾ ಕ್ರೀಡಾಂಗಣದಲ್ಲಿ ಹಳ್ಳ-ದಿನ್ನೆ ಇರುವ ಕಾರಣ ಮಳೆ ಬಂದಾಗ ನಿಲ್ಲುತ್ತೆ, ಇದನ್ನು ಸರಿಪಡಿಸುವ ಕಾರ್ಯ ತಾಲ್ಲೂಕಿನ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯವರು ಗಮನಹರಿಸಬೇಕು, ಜೋತೆಗೆ ಕ್ರೀಡಾಂಗಣದಲ್ಲಿ ವ್ಯವಸ್ಥಿತವಾದ ಸ್ವಚ್ಚತೆ, ಕ್ರೀಡಾಂಗಣದ ಉಸ್ತುವಾರಿ ಅವಶ್ಯಕವಾಗಿದೆ” ಎಂದರು.
ಈ ಸಂದರ್ಭದಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಮಾಲೂರಿನ ಕಿಶನ್ ಗೌಡ, ಗಣೇಶ್, ಕಬೀರ್, ಶಿವಮಣಿ, ಮನು, ಪ್ರಜ್ವಲ್, ಹರ್ಷಿತ್.ದಿಕ್ಷೀತ್, ಯೋಗಿತಾ, ಕೀರ್ತನಾ, ಮಧು, ಜಗನ್ನಾಥ್, ಗಿರೀಶ್ ಇತರರು ಹಾಜರಿದ್ದರು
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.