ಸಿದ್ದಾಪುರ(www.vknews.in): ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಲೀಡರ್ಸ್ ಮೀಟ್ ಹಾಗೂ ಅಭಿನಂದನಾ ಸಮಾರಂಭ ಸಮಸ್ತ ಜಿಲ್ಲಾ ಕಛೇರಿಯಾದ ಸಿದ್ದಾಪುರ ವರಕ್ಕಲ್ ಸ್ಮಾರಕ ಸೌಧದಲ್ಲಿ ದಿನಾಂಕ 25/09/2021 ರ ಶನಿವಾರ ಬೆಳಿಗ್ಗೆ ನಡೆಯಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಯಾಗಿದ್ದ ಎ.ಸಿ ಉಸ್ಮಾನ್ ಫೈಝಿ ಮಾಪಿಳತ್ತೋಡ್ ಅವರನ್ನು ಎಸ್ ವೈ ಎಸ್ ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಸ್ತ ಜಿಲ್ಲಾ ಕಛೇರಿಯ ಮೇಲಂತಸ್ತಿನ ಕಾಮಗಾರಿಯನ್ನು ಅಕ್ಟೋಬರ್ 13ರಂದು ಆರಂಭಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಕೊಡಗು ಜಿಲ್ಲಾಧ್ಯಕ್ಷರಾದ ಸಿ.ಪಿ.ಎಂ ಬಶೀರ್ ಹಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಸ್ತ ಜಿಲ್ಲಾ ಉಪ ಖಾಝಿ ಶೈಖುನಾ ಎಂ ಎಂ ಅಬ್ದುಲ್ಲಾ ಫೈಝಿ ಎಡಪ್ಪಾಲ, ಉಮರ್ ಫೈಝಿ ಸಿದ್ದಾಪುರ, ಅಶ್ರಫ್ ಫೈಝಿ ಕುಶಾಲನಗರ, ಮುಹಮ್ಮದ್ಅಲಿ ನೆಲ್ಯಹುದಿಕೇರಿ, ರಫೀಕ್ ಹಾಜಿ ಸುಂಟಿಕೊಪ್ಪ, ಮುಹಮ್ಮದ್ ಹಾಜಿ ಪೊನ್ನಂಪೇಟೆ, ಅಬೂಬಕ್ಕರ್ ದಾರಿಮಿ ಕೂಡಿಗೆ ಇನ್ನಿತರ ಉಲಮಾ ಉಮರಾ ನಾಯಕರು ಹಾಗೂ ಎಸ್ ವೈ ಎಸ್ ಜಿಲ್ಲಾ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.