ಎಣ್ಮಕಜೆ(ವಿಶ್ವಕನ್ನಡಿಗ ನ್ಯೂಸ್): ಎಣ್ಮಕಜೆಗೆ ಸಮೀಪದ ಚವರ್ಕಾಡ್ ಎಂಬಲ್ಲಿಯ ಎಂಟನೇ ತರಗತಿಯಲ್ಲಿ ಓದುತ್ತಿರುವ ಮುಸ್ತಫಾ ಎಂಬ ವಿದ್ಯಾರ್ಥಿ ಮತ್ತು ಆತನ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈಯ್ಯಲು ಶ್ರಮಿಸಿದ ಆ ಪ್ರದೇಶದ ಆರ್ ಎಸ್ ಎಸ್ ಗೂಂಡಾ ಕ್ರಿಮಿನಲ್ ಗಿರೀಶ್ ಪಾಟಾಳಿ ಎಂಬುವವನನ್ನು ಬಂಧಿಸಿ ಕಾನೂನಿನ ಮುಂದೆ ನಿಲ್ಲಿಸಬೇಕೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶ ಮಾದರಿಯಲ್ಲಿ ಅಮಾಯಕರನ್ನು ಹುಡುಕಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಇಲ್ಲಿನ ಕಾನೂನಿಗೆ ಸವಾಲೊಡ್ಡಿರುವುದಲ್ಲದೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸೌಹರ್ದತೆಗೆ ಹೆಸರುವಾಸಿಯಾದ ಮಂಜೇಶ್ಚರದ ಮಣ್ಣನ್ನು ಕೋಮುಗಲಭೆಗೆ ಸಿದ್ದಪಡಿಸುವುದರ ಸೂಚನೆ ಕೂಡಾ ಆಗಿದೆ. ಹಲ್ಲೆ ಮಾಡಿರುವ ಗಿರೀಶ್ ಪಾಟಾಳಿ ಎಂಬ ಕ್ರಿಮಿನಲ್ ಗೂಂಡಾನನ್ನು ಬಂಧಿಸಿ ಇವನ ಈ ದುಷ್ಕ್ರತ್ಯಕ್ಕೆ ಪ್ರೇರಿತವಾಗಿರುವ ಈ ಘಟನೆಯ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮುಂದೆ ತಂದು ಶಿಕ್ಷಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.