ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ದೊಡ್ಡಕಲ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅರ್ಹ ರೈತರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ಮಾತನಾಡಿ “ದೊಡ್ಡಕಲ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿನ 10 ಅರ್ಹ ರೈತ ಸದಸ್ಯರಿಗೆ ಒಂಬತ್ತು ಲಕ್ಷ ಮೂವತ್ತು ಸಾವಿರ ರೂಪಾಯಿ ಮೊತ್ತದ ಕೆ.ಸಿ.ಸಿ ಸಾಲ ನೀಡುತ್ತಿರುವುದು ಪ್ರಶಂಸನೀಯವಾದದ್ದು, 25 ವರ್ಷದಲ್ಲಿ ಇಂದು ಪ್ರಥಮ ಬಾರಿಗೆ ಸಾಲ ನೀಡುತ್ತಿರುವುದು ಒಂದು ಹೆಗ್ಗಳಿಕೆ, ಗ್ರಾಮೀಣ ಪ್ರದೇಶದಲ್ಲಿನ ರೈತರು, ಮಹಿಳಾ ಸಂಘಗಳ ಎಲ್ಲಾರೂ ಈ ರೀತಿಯ ಸಾಲ ಸೌಲಭ್ಯಗಳನ್ನು ಪಡೆಯುವ ಮೂಲಕ ಪ್ರಗತಿಗೆ ಬರಲಿ ಎಂಬುದು ಮೂಲ ಆಶಯ ಆಗಿದೆ” ಎಂದರು.
ಡಿ.ಸಿ.ಸಿ ಬ್ಯಾಂಕ್ ನ ಮಾಲೂರು ತಾಲ್ಲೂಕು ನಿರ್ದೇಶಕರಾದ ಚನ್ನರಾಯಪ್ಪ ರವರು ಮಾತನಾಡುತ್ತಾ “ರೈತರು ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಡಿ.ಸಿ.ಸಿ ಬ್ಯಾಂಕ್ ನೀಡುವ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚು ಜನರು ಪಡೆಯುವ ಮೂಲಕ ತಾವೆಲ್ಲಾರೂ ಸಹ ಮುಖ್ಯವಾಹಿನಿಗೆ ಬರಬೇಕು, ಸಂಘವು ಸಾಲ ವಿತರಿಸಿ ನಿಮ್ಮನ್ನು ಅಭಿವೃದ್ದಿಯ ಕಡೆ ಕೊಂಡೋಯುವ ಕೆಲಸವನ್ನು ಮಾಡುತ್ತದೆ” ಎಂದರು.
ದೊಡ್ಡಕಲ್ಲಹಳ್ಳಿ ಗ್ರಾಮದ ಮುಖಂಡರು ಹಾಗೂ ವಕೀಲರಾದ ಆರ್.ನಾರಾಯಣಸ್ವಾಮಿ ರವರು ಮಾತನಾಡಿ “ಗ್ರಾಮೀಣ ಪ್ರದೇಶದಲ್ಲಿನ ರೈತರು, ಮಹಿಳೆಯರ ಅಭಿವೃದ್ದಿ ಸಹಕಾರ ಸಂಘಗಳ ಮೂಲಕ ನಡೆಯಲಿದ್ದು ಈ ಬ್ಯಾಂಕ್ ನೀಡುವ ಮಹತ್ತರವಾದ ಸಾಲ ಸೌಲಭ್ಯಗಳನ್ನು ಪ್ರತಿಯೋಬ್ಬರು ಪಡೆಯುವ ಮೂಲಕ ತಮ್ಮ ಬದುಕನ್ನು ಹಸನುಗೋಳಿಸುವ ಕಾರ್ಯ ಆಗಲಿ, ಹಾಗೇ ಸಂಘದ ಬೆಳವಣಿಗೆಯೂ ಸಹ ನಮ್ಮ ಮೇಲಿದೆ” ಎಂದರು.
ಸನ್ಮಾನ್ಯ ಶಾಸಕರಾದ ಕೆ.ವೈ.ನಂಜೇಗೌಡ ರವರಿಗೆ ವಕೀಲರಾದ ಆರ್.ನಾರಾಯಣಸ್ವಾಮಿ ರವರು ಅದ್ದೂರಿಯಾಗಿ ಬೆಳ್ಳಿಗದೆ ನೀಡುವ ಮೂಲಕ ಸನ್ಮಾನಿಸಿಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ವಕೀಲರಾದ ಆರ್.ನಾರಾಯಣಸ್ವಾಮಿ, ನಲ್ಲಂಡಹಳ್ಳಿ ನಾಗರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಮುನೇಗೌಡ, ಉಪಾಧ್ಯಕ್ಷರಾದ ಜೋಗಪ್ಪ, ಪ್ರಭಾರ ಸಿ.ಇ.ಓ ಎಂ.ಸುಧಾಕರ್, ತ್ಯಾಗರಾಜು, ಗೋವಿಂದಪ್ಪ, ರಾಜೇನಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಣ್, ಸದಸ್ಯರಾದ ಅಶೋಕ್, ರವಿ, ಪ್ರೇಮಾ ಅರ್ಜುನಪ್ಪ, ಪದಮ್ಮ ಮಾಳಪ್ಪ, ಚಿಕ್ಕಕಲ್ಲಹಳ್ಳಿ ಗೋಪಿ, ಧನಮ್ಮ, ಶಿಕ್ಷಕರಾದ ಗುಂಡಪ್ಪ, ದೊಡ್ಡಕಲ್ಲಹಳ್ಳಿ ಮಂಜುನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್, ರಾವ್, ಪ್ರಕಾಶ್, ನಜುಂಡ ಗೌಡ, ಗೋವಿಂದ್ ಹಾಗೂ ದೊಡ್ಡಕಲ್ಲಹಳ್ಳಿ ಮಂಜುನಾಥ್, ನವೋದಯ ಶಿಕ್ಷಕರಾದ ಸುರೇಶ್ ಎಂ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.