ಮಂಗಳೂರು (www.vknews.com) : ಮ ನ ಪಾ ಅಧಿಕಾರಿಗಳು ನಗರದ ಸ್ಟೇಟ್ ಬ್ಯಾಂಕ್ ಸಮೀಪ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಬಲವಂತದಿಂದ ತೆರವು ಗೊಳಿಸಲು ಪ್ರಯತ್ನ ಪಟ್ಟಿದ್ದು ಇದನ್ನು ಎಸ್ಡಿಟಿಯು ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣೂರು ಖಂಡಿಸಿದ್ದಾರೆ.
ಬುಧವಾರ ಬೆಳೆಗ್ಗೆ 10 ಗೆಂಟೆಗೆ ಸ್ಟೇಟ್ ಬ್ಯಾಂಕ್ ಸಮೀಪ ಬೀದಿ ಬದಿ ವ್ಯಾಪಾರಸ್ಥರನ್ನು ತೆರವಿಗೆ ಪ್ರಯತ್ನ ಪಟ್ಟಿದ್ದು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಸ್ಡಿಟಿಯು ರಾಜ್ಯ ಕಾರ್ಯದರ್ಶಿ ಶೆರೀಫ್ ಪಾಂಡೇಶ್ವರ್ ವ್ಯಾಪಾರಿಗಳೊಂದಿಗೆ ಜೊತೆಗೂಡಿ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣದಿಂದ ವ್ಯಾಪಾರಿಗಳಿಗೆ ಅಧಿಕಾರಿಗಳು ಬುಧವಾರ ಸಂಜೆಯವರೆಗೆ ಕಾಲಾವಕಾಶ ನೀಡಿ ಹಿಂತಿರುಗಿದ್ದಾರೆ.
ಕೋವಿಡ್ ನಿಂದ ಹದಗೆಟ್ಟ ಆರ್ಥಿಕತೆಯ ಹೆಚ್ಚಿನ ಸಂಕಷ್ಟ ಅನುಭವಿಸಿದ್ದು ದಿನನಿತ್ಯ ವ್ಯಾಪಾರ ನಡೆಸಿ ಬದುಕು ಸಾಗಿಸುವವರಾಗಿದ್ದಾರೆ. ಬಡ ಮಧ್ಯಮ ವರ್ಗದ ಜೀವನೋಪಾಯಕ್ಕೆ ಅವಕಾಶ ಮಾಡಿಕೊಡ ಬೇಕಾದ ಇಲ್ಲಿನ ಶಾಸಕರು, ಕಾರ್ಪರೇಟರ್ ಗಳು ಜಿಲ್ಲಾಡಳಿತ ಬಡ ಮಧ್ಯಮ ವರ್ಗದ ಗಾಯದ ಮೇಲೆ ಬರೆ ಎಳೆಯುತ್ತಿದೆ ಆದ್ದರಿಂದ ಜಿಲ್ಲಾಡಳಿತ ಬೀದಿ ಬದಿ ವ್ಯಾಪಾರಸ್ಥರ ವಿಶ್ವಾಸಕ್ಕೆ ತೆಗೆದು ಪರ್ಯಾಯ ವ್ಯವಸ್ಥೆಗೊಳಿಸುವ ವ್ಯವಸ್ಥೆ ಮಾಡಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣೂರು ಆಗ್ರಹಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.