ಡಾಕ(ವಿಶ್ವಕನ್ನಡಿಗ ನ್ಯೂಸ್):ದಕ್ಷಿಣ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿದ್ಲ ಪ್ರಮುಖ ರೋಹಿಂಗ್ಯಾ ಮುಸ್ಲಿಂ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೊಹೀಬುಲ್ಲಾ, 730,000 ಕ್ಕಿಂತ ಹೆಚ್ಚು ಮುಸ್ಲಿಂ ರೋಹಿಂಗ್ಯಾಗಳು ಆಗಸ್ಟ್ 2017 ರಲ್ಲಿ ಕ್ರೂರ ಮಿಲಿಟರಿ ದಮನದ ನಡುವೆ ಮ್ಯಾನ್ಮಾರ್ ನಿಂದ ಪಲಾಯನ ಮಾಡಿದ ನಂತರ ಚದುರಿಹೋಗಿದ್ಲ ಹಲವಾರು ಸಮುದಾಯ ಗುಂಪುಗಳನ್ನು ಒಂದಾಗಿಸಿ ಸಂಘಟಿಸಿ ನ್ಯಾಯಕ್ಕಾಗಿ ಹೋರಾಟ ತೊಡಗಿಸಿಕೊಂಡಿದ್ದರು.
ಸಂಜೆಯ ಪ್ರಾರ್ಥನೆಯ ಬಳಿಕ ಜನರೊಂದಿಗೆ ಮಾತನಾಡುತ್ತಿದ್ದ ವೇಳೆ ಆಗಮಿಸಿದ ಅಪರಿಚಿತ ಬಂದೂಕುಧಾರಿಗಳು ಕನಿಷ್ಠ ಮೂರು ಸುತ್ತಿನ ಗುಂಡು ಹಾರಿಸಿ , ಆತನನ್ನು ಕೊಲ್ಲಲಾಯಿತು ಎಂದು ಮೊಹಮ್ಮದ್ ನೌಖಿಮ್, ಮೊಹಿಬುಲ್ಲಾ ಅವರ ಅರಕನ್ ರೋಹಿಂಗ್ಯಾ ಸೊಸೈಟಿ ಫಾರ್ ಪೀಸ್ ಅಂಡ್ ಹ್ಯೂಮನ್ ರೈಟ್ಸ್ (ARPSH) ವಕ್ತಾರರು ಹೇಳಿದರು. ಅವರು ಎಎಫ್ಪಿ ಸುದ್ದಿ ಸಂಸ್ಥೆಗೆ ಅಡಗುತಾಣದಿಂದ ಮಾಧ್ಯಮಕ್ಕೆ ತಿಳಿಸಿದ್ದಾರೆ, ಈ ಹತ್ಯೆಯು ಅನೇಕ ರೋಹಿಂಗ್ಯಾ ನಾಯಕರನ್ನು ತಲೆಮರೆಸಿ ಕೊಳ್ಳುವಂತಾಗಿಸಿದೆ.
ವಿಶ್ವ ಸಂಸ್ಥೆಯ ನಿರಾಶ್ರಿತರ ವಕ್ತಾರರು “ತೀರಾ ವಿಷಾದನೀಯ ದುರ್ಘಟನೆ” ಎಂದು ಬಣ್ಣಿಸಿದ್ದು,ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಪೂರ್ಣ ತನಿಖೆ ನಡೆಸಲು ಬಾಂಗ್ಲಾದೇಶ ಸರ್ಕಾರಕ್ಕೆ ಆಗ್ರಹಿಸಿದೆ.
ಮೊಹಿಬುಲ್ಲಾ ವಿಶ್ವ ಸಂಸ್ಥೆಯಲ್ಲಿ ರೊಹ್ಯಂಗಾ ನಿರಾಶ್ರಿತರ ಸಮಸ್ಯೆಗಳನ್ನು ಜಗತ್ತಿಗೆ ಅನಾವರಣ ಮಾಡಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.