ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್) : ಪುರಾತನ ಐತಿಹಾಸಿಕ ನಂಜನಗೂಡಿನ ದೇಗುಲ ಕೆಡವಿದ್ದನ್ನು ಖಂಡಿಸಿ ,ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಸಿದ್ದಾಪುರದಲ್ಲಿ ಪಂಜಿನ ಮರವಣಿಗೆ ಹಾಗೂ ಬ್ರಹತ್ ಪ್ರತಿಭಟನೆ ನಡೆಯಿತು.
ಮಾಜಿ ಬೈಂದೂರು ಶಾಸಕ ಕೆ ಗೋಪಾಲ್ ಪೂಜಾರಿ ನೇತೃತ್ವದಲ್ಲಿ ಸಿದ್ದಾಪುರ ಪ್ರೌಢ ಶಾಲಾ ಮೈದಾನ ದಿಂದ ಹೋರಾಟ ಪಂಜಿನ ಮರೆವಣಿಗೆ ಸಿದ್ದಾಪುರ ಕೆಳ ಪೇಟೆ ಸಾಗಿ ನಂತರ ಜನಜಾಗ್ರತಿ ಸಭೆ ನಡೆಯಿತು. ಮಾಜಿ ಬೈಂದೂರು ಕೆ ಗೋಪಾಲ್ ಪೂಜಾರಿ ಸರ್ಕಾರದ ವಿರುದ್ಧ ಬಹಿರಂಗವಾಗಿ ಕಿಡಿಕಾರಿದರು.
ಕುಂದಾಪುರ ತಾಲೋಕು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ವಿಕಾಸ್ ಹೆಗ್ಡೆ ಎಂದಿನಂತೆ ಸರ್ಕಾರದ ವಿರುದ್ಧ ಹಾಗೂ ಸ್ಥಳೀಯ ಶಾಸಕರ ವಿರುದ್ಧ ರೋಷ ಹೊರಹಾಕಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕ್ರತರು ಅಭಿಮಾನಿಗಳು ಭಾಗಿಯಾಗಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.