ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ): 2023 ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಟಿಕೇಟ್ ನೀಡುವಂತೆ ಎಪಿಎಂಸಿ ಮಾಜಿ ಅಧ್ಯಕ್ಷ ಕುರ್ಕಿರಾಜೇಶ್ವರಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ , ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ನನ್ನ ಬಿಟ್ಟು ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರು ಅವರ ಪರವಾಗಿಯೂ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಬಿಡದಿಯಲ್ಲಿ ನಡೆದ ಜೆಡಿಎಸ್ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಕುರ್ಕಿ ರಾಜೇಶ್ವರಿ ಅವರು ಜೆಡಿಎಸ್ ವರಿಷ್ಕರನ್ನ ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ಕೋರಿದರು. ಮೊದಲಿನಿಂದಲೂ ನಮ್ಮ ಕುಟುಂಬ ಜನತಾದಳ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ನನ್ನ ತಂದೆ ಕುರ್ಕಿ ರಾಮಚಂದ್ರಪ್ಪ ಅವರು ೧೯೭೯ ರಿಂದಲೂ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಚುನಾಯಿತರಾಗಿ ಸತತವಾಗಿ ೫ ಬಾರಿ ನರಸಾಪುರ ಹೋಬಳಿ ಎಸ್.ಎಫ್.ಸಿ.ಎಸ್ ಸೊಸೈಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನನ್ನ ತಾಯಿ ಮಂಜುಳ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು.
ನನ್ನ ಕುಟುಂಬ ಸ್ಥಳೀಯ ರಾಜಕಾರಣ ಹಾಗೂ ಜನಸೇವೆಯಲ್ಲಿ ತೊಡಗಿದ್ದು ೨೦೦೫ ರಲ್ಲಿ ನನ್ನ ತಂದೆ ರಾಮಚಂದ್ರಪ್ಪ ವೇಮಗಲ್ ಕ್ಷೇತ್ರದ ಜೆಡಿಎಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಸಂಘಟನಾ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರು ಅಪಘಾತದಲ್ಲಿ ದಿವಂಗತರಾದರು. ನಂತರ ನನ್ನ ಪತಿ ಹೆಚ್.ಎನ್. ಹರೀಶ್ ಅವರು ವೇಮಗಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ತೆಗೆದುಕೊಂಡು ನಾನು ಕೂಡ ಪಕ್ಷ ಸಂಘಟನಾ ಕಾರ್ಯಗಳಲ್ಲಿ ಭಾಗವಹಿಸಲು ಆರಂಭಿಸಿ ಸತತವಾಗಿ ಇದುವರೆವಿಗೂ ಪಕ್ಷ ಸಂಘಟನಾ ಕಾರ್ಯಗಳಲ್ಲಿ ಭಾಗವಹಿಸಿದ್ದೇನ.
ಈ ಮಧ್ಯ ಪಕ್ಷದ ಅಭ್ಯರ್ಥಿಗಳು ಸ್ಥಳೀಯ ಚುನಾವಣೆಗಳಲ್ಲಿ ಹಾಗೂ ಶಾಸಕ ಸ್ಥಾನಕ್ಕೆ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಚುನಾವಣೆ ಸಕ್ರೀಯವಾಗಿ ಭಾಗವಹಿಸುವುದ ರೊಂದಿಗೆ ಪಕ್ಷ ಸಂಘಟನೆಯ ಚಟುವಟಿಕೆಗಳಲ್ಲಿ ಸತತವಾಗಿ ತೊಡಗಿಕೊಂಡಿದ್ದೇನೆ ಎಂದು ವರಿಷ್ಠರಲ್ಲಿ ವಿವರಿಸಿದ್ದಾರೆ. ೨೦೦೯ ರಲ್ಲಿ ನರಸಾಪುರ ಗ್ರಾಮ ಪಂಚಾಯಿತಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷರಾಗಿ ಗೆಲ್ಲಿಸಲು ಮತ್ತು ಉಪಾಧ್ಯಕ್ಷರಾಗಿ ನನ್ನ ಪತಿ ಹೆಚ್.ಎನ್.ಹರೀಶ್ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷದ ಸಂಘನೆಯನ್ನು ಮಾಡಿರುತ್ತೇನೆ.
ನಂತರ ೨೦೦೯ ರಲ್ಲಿ ನಾನು ನರಸಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು , ಆ ಸಂದರ್ಭದಲ್ಲಿ ಅವಕಾಶ ಸಿಗದೇ ೨೦೧೧ ರಲ್ಲಿ ವೇಮಗಲ್ ಹೋಬಳಿ ಭಾಗದಿಂದ ಎ.ಪಿ.ಎಂ.ಸಿ ಸದಸ್ಯರಾಗಿ ಚುನಾಯಿತರಾಗಿ ೨೦೧೩ ರಲ್ಲಿ ಕೋಲಾರ ಎ.ಪಿ.ಎಂ.ಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಮತ್ತು ೨೦೧೩ ರಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿ ೨೦೧೫ ರವರೆಗೆ ಕಾರ್ಯ ನಿರ್ವಹಿಸಿದ್ದೇನೆ. ೨೦೧೫ ರಲ್ಲಿ ನರಸಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೧೧,೨೫೦ ಮತಗಳನ್ನು ಪಡೆದು ೧೭೦ ಮತಗಳ ಅಂತರದಿಂದ ಸೋಲನ್ನು ಅನುಭವಿಸಿರುತ್ತೇನೆ.
ನಂತರ ನಡೆದ ಸ್ಥಳೀಯ ಚನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕಾರ್ಯ ನಿರ್ವಹಿಸಿ ನಾನು ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿದ್ದು ಇದುವರೆಗೂ ಪಕ್ಷ ಸಂಘಟನೆ ಕಾರ್ಯಚಟುವಟಿಕೆಗಳಲ್ಲಿ ಸತತವಾಗಿ ಭಾಗವಹಿಸುವುದರೊಂದಿಗೆ ಸಕೀಯ ರಾಜಕಾರಣ , ಜನರ ಸೇವೆಯನ್ನು ಹಾಗೂ ಜೆ.ಡಿ.ಎಸ್ ಪಕ್ಷದ ಸಂಘಟನಾ ಚಟುವಟಿಕೆಯನ್ನು ಕೋಲಾರ ತಾಲ್ಲೂಕು ವ್ಯಾಪ್ತಿ ಮಟ್ಟದಲ್ಲಿ ನಡೆಸಿಕೊಂಡು ಬಂದಿದ್ದೇನೆ. ಈ ಭಾಗದ ಜನರು ನನಗೆ ಚಿರುಪರಿಚಿತರಾಗಿದ್ದು ನಾನು ಸಹ ಜನರಿಗೆ ಚಿರುಪರಿಚಿತಳಾಗಿದ್ದು , ಸತತವಾಗಿ ರಾಜಕೀಯ ಹಾಗೂ ಸೇವಾ ಚಟುವಟಿಕೆಗಳಲ್ಲಿ ನನಗೆ ಕ್ಷೇತ್ರದ ಜನರ ಹಾಗೂ ಸ್ಥಳೀಯ ನಾಯಕರ ಜೊತೆಗೆ ಒಡನಾಟವಿದೆ.
೨೦೨೩ ರ ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದಿಂದ ಅವಕಾಶ ಕಲ್ಪಿಸಿದರೆ ಪಕ್ಷದ ಸ್ಥಳೀಯ ನಾಯಕರೊಂದಿಗೆ ನಾನು ಉತ್ತಮ ಬಾಂಧವ್ಯವನ್ನು ಹೊಂದಿದ್ದು ಸ್ಥಳೀಯ ನಾಯಕರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮತ್ತು ಜನಸೇವೆ ಮಾಡುವ ಪ್ರಯತ್ನ ನಡೆಸುತ್ತೇನೆ. ಆ ಭಾಗದಿಂದ ಚುನಾವಣೆಯನ್ನು ನಡೆಸುವ ಮೂಲಕ ಪಕ್ಷಕ್ಕೆ ಗೆಲುವನ್ನು ತಂದುಕೊಡುವ ನಂಬಿಕೆ ಲೆಕ್ಕಾಚಾರಗಳು ನನಗಿದ್ದು ಪಕ್ಷದ ವರಿಷ್ಠರ ಹಾಗೂ ಸ್ಥಳೀಯ ನಾಯಕರ ಸಹಕಾರವನ್ನು ಕೋರಿ ಅವರ ಸಹಕಾರದೊಂದಿಗೆ ಈ ಚುನಾವಣೆಯನ್ನು ನಿರ್ವಹಿಸುತ್ತೇನೆ.
೨೦೨೩ ರ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ನಾನು ಬಯಸಿದ್ದು ಜೆಡಿಎಸ್ ಪಕ್ಷ ವರಿಷ್ಠರು ಅವಕಾಶ ಕಲ್ಪಿಸಿದರೆ ಚುನಾವಣೆಗೆ ಬೇಕಾಗುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು ಅವಕಾಶ ಕಲ್ಪಿಸಬೇಕೆಂದು ವರಿಷ್ಕರಲ್ಲಿ ಕುರ್ಕಿರಾಜೇಶ್ವರಿ ಅವರು ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.