ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಐಟಿಐ ಬೋಧಕವರ್ಗವನ್ನು ಶಿಕ್ಷಕರೆಂದು ಪರಿಗಣಿಸುವುದು ಮತ್ತು ವೃಂದನೇಮಕಾತಿ ನಿಯಮಗಳ ಬದಲಾವಣೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಭರವಸೆ ನೀಡಿದರು.
ಜಿಲ್ಲಾ ನೌಕರರ ಸಂಘದಿಂದ ಐಟಿಐಗಳ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸಲು ನಗರದ ಸರ್ಕಾರಿ ಐಟಿಐನಲ್ಲಿ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ಪ್ರಯತ್ನದಿಂದ ಡಿಸಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಂಟಿ ಸಮಾಲೋಚನಾ ಸಮಿತಿ ಸಭೆ ಕರೆಯಲು ಕ್ರಮವಹಿಸಲಾಗಿದೆ , ಅದಕ್ಕೂ ಮುನ್ನಾ ಇಲಾಖಾವಾರು ನೌಕರರ ಸಮಸ್ಯೆಗಳನ್ನು ಆಲಿಸಲು ಜಿಲ್ಲಾ ಸಂಘ ಪ್ರಯತ್ನ ನಡೆಸಿದೆ ಎಂದು ತಿಳಿಸಿದರು. ಪ್ರತಿ ಇಲಾಖೆಯ ನೌಕರರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಜಿಲ್ಲಾ ಸಂಘ , ರಾಜ್ಯ ಸಂಘದ ವತಿಯಿಂದ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದರು.
ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ಐಟಿಐ ನೌಕರರ ಸಂಘದ ಪ್ರತಿನಿಧಿ ಶಿವಕುಮಾರ್ ಮಾತನಾಡಿ , ನಾವು ಶಿಕ್ಷಕರಾಗಿದ್ದೇವೆ ಆದರೆ ನಮ್ಮನ್ನು ಶಿಕ್ಷಕರ ದಿನಾಚರಣೆಗೆ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದರು. ವೃಂದ ನೇಮಕಾತಿ ನಿಯಮಗಳ ಬದಲಾವಣೆ ಅಗತ್ಯವಿದ್ದು , ಈ ಸಬಂಧ ರಾಜ್ಯ ಸಂಘದ ಸಹಕಾರ ಪಡೆದು ಸರ್ಕಾರದ ಮೇಲೆ ಒತ್ತಡ ತರಲು ಅಧ್ಯಕ್ಷರಿಗೆ ಮನವಿ ಮಾಡಿದರು. ಮುಂಬಡ್ತಿ ವಿಳಂಬ , ಟೈಬಾಂಡ್ , ಪೊಬೆಷನರಿ ಡಿಕ್ಟೇರ್ ನೀಡಿಕೆಯಲ್ಲಿ ವಿಳಂಬ ಮತ್ತಿತರ ಸಮಸ್ಯೆಗಳ ಕುರಿತು ಐಟಿಐ ಸಿಬ್ಬಂದಿ ಜಿಲ್ಲಾ ಸಂಘದ ಗಮನಕ್ಕೆ ತಂದರು.ಐಟಿಐನಲ್ಲಿ ಕೋಟ್ಯಾಂತರ ರೂ ಮೌಲ್ಯದ ಉಪಕರಗಳಿವೆ , ಆದರೆ ಇಲ್ಲಿ ರಾತ್ರಿ ಕಾವಲುಗಾರರನ್ನು ಸರ್ಕಾರ ನೇಮಿಸಿಲ್ಲ , ಡಿ ಗ್ರೂಪ್ ನೌಕರರ ಕೊರತೆಯೂ ಇದೆ ಎಂದು ತಿಳಿಸಿದರು.
ನೌಕರರ ಸಮಸ್ಯೆಗಳನ್ನು ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಗಮನಕ್ಕೆ ತರುವುದಾಗಿಯೂ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು. ದಳಸನೂರು ಐಟಿಐನ ಪ್ರಾಂಶುಪಾಲ ವೀರಣ್ಣ ಹಳ್ಳಿಕಟ್ಟಿ , ವೆಂಕಟೇಶ್ , ಕೋಲಾರ ಐಟಿಐನ ಶಿವಕುಮಾರ್ , ಚಿನ್ನಪ್ಪ , ಲಕ್ಷ್ಮಮ್ಮಪುಷ್ಪ , ಶಾಂತಮ್ಮ , ದೇವರಾಜಸಮುದ್ರ ಐಟಿಐನ ನರಸಿಂಹರೆಡ್ಡಿ , ಮುನಿರಾಜಪ್ಪಕಿರಣ್ , ಕೆಜಿಎಫ್ ಐಟಿಐನ ವಿಜಯೇಂದ್ರ ಮುಳಬಾಗಿಲಿನ ಶಿವಾನಂದ್ , ರೋಣೂರು ಐಟಿಐನ ವೇಮಣ್ಣ , ಜಗನ್ನಾಥ್ ಮತ್ತಿತರರು ಸಮಸ್ಯೆಗಳ ಕುರಿತು ನೌಕರರ ಸಂಘದ ಅಧ್ಯಕ್ಷರ ಗಮನಕ್ಕೆ ತಂದರು.
ಸಭೆಯಲ್ಲಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಖಜಾಂಚಿ ವಿಜಯ್ , ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ , ಜಂಟಿ ಕಾರ್ಯದರ್ಶಿ ಮಂಜುನಾಥ್ , ನೌಕರರ ಸಂಘದ ಕಾರ್ಯಕಾರಿ ಸದಸ್ಯರಾದ ವಿಜಯಮ್ಮ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.