ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಸೀತನಾಯಕನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಸಮಾಜ ಸೇವಕ ಹಾಗೂ ಗ್ರಾ.ಪಂ.ಸದಸ್ಯ ಜಾವೀದ್ ಖಾನ್ ಬಹುಮಾನ ವಿತರಿಸುವ ಮೂಲಕ ಕ್ರೀಡಾ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಜಾವೀದ್ ಖಾನ್ “ಕ್ರೀಡೆಗಳು ನಮ್ಮ ದೇಹಕ್ಕೆ ನವಚೈತನ್ಯ ನೀಡುತ್ತವೆ. ಅವುಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ, ದೇಶದ ಸರ್ವತೋಮುಖ ಪ್ರಗತಿ ಯುವಜನರ ಕೈಯಲ್ಲಿದೆ. ಅವರು ಒಗ್ಗಟ್ಟಿನಿಂದ ಮುನ್ನುಗ್ಗಿದರೆ ಸಾಧನೆ ಮಾಡಲಾರದೆ ಇರುವುದು ಯಾವುದೂ ಇರುವುದಿಲ್ಲ. ಕ್ರೀಡೆಗಳು ಯುವಜನರಲ್ಲಿ ಏಕತೆ ತರಲಿಕ್ಕೆ ಸಹಕಾರಿಯಾಗಲಿವೆ ಎಂದರು.
ತಾಲ್ಲೂಕಿನ ಸೀತನಾಯಕನಹಳ್ಳಿ ಗ್ರಾಮದಲ್ಲಿ ತಬ್ರಜ್ ಖಾನ್ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿದ್ದವು.
ಸೀತನಾಯಕನಹಳ್ಳಿ ಗರುಡ ಕ್ರಿಕೇಟರ್ಸ್ ಪ್ರಥಮ ಬಲು ಮಾನವ 10 ಸಾವಿರ ರೂ ಹಾಗೂ ಟ್ರೋಫಿ, ಸೂಪರ್ ಕಿಂಗ್ಸ್ ತಂಡ 5 ಸಾವಿರ ರೂ ಹಾಗೂ ಟ್ರೋಫಿ, ಸೂಪರ್ ನೋವಾಸ್ಸ್ ತಂಡ 3 ಸಾವಿರ ರೂ ಹಾಗೂ ಟ್ರೋಪಿಯನ್ನು ಪಡದಿದೆ. ಬಹುಮಾನಗಳ ಪ್ರಯೋಜಕರು. ಗ್ರಾ.ಪಂ ಸದಸ್ಯರು ಹಾಗೂ ಸಮಾಜಸೇವಕರು ಜಾವೀದ್ ಖಾನ್ ವಿತರಿಸಿ ಪ್ರೋತ್ಸಾಹ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಗಳ ವ್ಯವಸ್ಥಾಪಕ ತಬ್ರಜ್ ಖಾನ್, ಶಬೀರ್ ಎಂ.ಟಿ.ಬಿ, ಶಾರೂಕ್ ಖಾನ್, ಶ್ರೀಕಾಂತ್, ವೆಂಕಟೇಶ್ ರೆಡ್ಡಿ, ಖಲೀಂ ಷರೀಫ್, ಸೈಯದ್, ಇಂತಿಯಾಜ್ ಖಾನ್, ಲಿಯಾಖಿತ್, ಜಯೀಂ ಖಾನ್ , ಇಮ್ರಾನ್ ಉಲ್ಲಾ ಬೇಗ್ ಸೇರಿದಂತೆ ಅನೇಕ ಕ್ರೀಡಾ ಪಟುಗಳು ಭಾಗವಹಿಸಿದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.