ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಮೂಲಕ ಹಾದುಹೋಗುವ ಮಾದನಹಟ್ಟಿ ಹಾಗೂ ಮಾರಸಂದ್ರ ಭಾಗದಲ್ಲಿನ ಆಲ್ ಕಾರ್ಗೋ ವೇರ್ ಹೌಸ್ ಕಂಪನಿಗೆ ಹೋಗುವ ಪ್ರಮುಖ ರಸ್ತೆ, ಬೆಂಗಳೂರು ಪ್ರವೇಶಿಸಲು ಇರುವ ಪ್ರಮುಖ ರಸ್ತೆಯು ಅಲ್ಲಲ್ಲಿ ದೊಡ್ಡ ಗಾತ್ರದ ಹಳ್ಳಗಳು ಬಿದ್ದಿದ್ದು, ಅನೇಕ ಭಾರಿ ಪ್ರಮಾಣದ ಅಫಘೌತಗಳಿಗೆ ಆಹ್ವಾನ ನೀಡುತ್ತಿತ್ತು.
ಇದನ್ನು ಗಮನಿಸಿ ಎರಡು ದಿನಗಳ ಹಿಂದೆ ಈ ಭಾಗದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೇಡಿ ಮಲ್ಲಸಂದ್ರ ಗ್ರಾಮದ ಮುಸ್ಲಿಂ ಸಮುದಾಯದ ಕುಟುಂಬವೊಂದು ರಸ್ತೆಯ ಹಳ್ಳದಲ್ಲಿ ದ್ವಿಚಕ್ರ ವಾಹನದಲ್ಲಿ ಬಿದಿದ್ದನ್ನು ಗಮನಿಸಿದ ಮಾಲೂರಿನ ಸ್ಪರ್ಧಾ ಮೈತ್ರಿ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಮಾದನಹಟ್ಟಿ ಮಹೇಶ್ ರವರು ಅವರನ್ನು ಉಪಚರಿಸಿ ಹಾರೈಸುವ ಮೂಲಕ ಮಾನವೀಯತೆ ತೋರಿಸಿ ಮಹತ್ತರ ಬದಲಾವಣೆಗೆ ಸಾಕ್ಷಿ ಆಗಿದ್ದಾರೆ.
ರಸ್ತೆಯ ಹಳ್ಳಗಳನ್ನು, ಅನೇಕ ಅಪಘೌತಗಳನ್ನು ಕಂಡ ಮಹೇಶ್ ರವರು ಮರು ದಿನವೇ ತನ್ನ ಸಹೋದರರಾದ ಮಾದನಹಟ್ಟಿ ಗ್ರಾಮದ ರವಿಕುಮಾರ್.ಎಂ.ಎನ್ ಹಾಗೂ ಪವನ್ ಕುಮಾರ್ ರವರಿಗೆ ಈ ವಿಷಯ ವಿವರಿಸಿ ಹೇಳಿದ ಕೂಡಲೇ ಸ್ಪಂದಿಸಿದ ಈ ಇಬ್ಬರು ಯುವಕರು ಡಾಂಬರು ಕಿತ್ತು ಬಿದ್ದಿದ್ದ, ಅಪಘೌತಗಳಿಗೆ ಸದಾ ಅಹ್ವಾನ ನೀಡುತ್ತಿದ್ದ ದೊಡ್ಡ ದೊಡ್ಡ ಹಳ್ಳಗಳಿಗೆ ಜಲ್ಲಿ, ಕಲ್ಲು, ಇಟ್ಟಿಗೆ ಹಾಗೂ ಮಣ್ಣು ತುಂಬಿಸಿ ಮಾನವೀಯ ಕಾರ್ಯ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಪರ್ಧಾ ಮೈತ್ರಿ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ರವರು “ರಸ್ತೆಯಲ್ಲಿ ಸಾಕಷ್ಟು ದೊಡ್ಡ ಹಳ್ಳಗಳು ಬಿದ್ದಿದ್ದು ಅನೇಕ ಅಪಘೌತಗಳನ್ನು ಗಮನಿಸಿದ್ದೇನೆ, ಆ ನಿಟ್ಟಿನಲ್ಲಿ ನಮ್ಮ ಮಾದನಹಟ್ಟಿ ಗ್ರಾಮದ ಸಹೋದರರಾದ ರವಿಕುಮಾರ್, ಹಾಗೂ ಪವನ್ ಕುಮಾರ್ ರವರಿಗೆ ತಿಳಿಸಿದ ಕೂಡಲೇ ಬಂದು ಹಳ್ಳ ಬಿದ್ದ ರಸ್ತೆ ಸರಿಪಡಿಸಿ ಜನಮನ್ನಣೆಗೆ ಪಾತ್ರರಾಗಿರುವುದು ಅಭಿನಂದನೀಯ, ಹಾಗೇ ಇದು ಇತರರಿಗೆ ಸ್ಪೂರ್ತಿಯು ಹೌದು, ನಾವು ಎಲ್ಲಾದಕ್ಕೂ ಸರ್ಕಾರವನ್ನೇ ಹೊಣೆ ಮಾಡದೇ ಯುವಜನಾಂಗದಿಂದಾಗುವ ಸಣ್ಣ ಸಣ್ಣ ಸೇವೆ ಮಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು” ಎಂದರು.
ಇವರ ಮಾನವೀಯ ಕಾರ್ಯದ ಉತ್ತಮ ಸೇವೆಗೆ ನಮ್ಮ ದಿನಪತ್ರಿಕೆಯು ಸಹ ಸಲಾಂ ಅಭಿನಂದನೆ ಅರ್ಪಿಸುತ್ತದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.