(www.vknews.com) : ಸುರತ್ಕಲ್ ನಲ್ಲಿ ಅನೈತಿಕ ಪೊಲೀಸ್ ಗಿರಿ ಸಮರ್ಥಿಸಿ ಭಜರಂಗ ದಳ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಚೈತ್ರಾ ಕುಂದಾಪುರ ಎಂಬ ಹೆಣ್ಣು ಮಗಳ ಭಾಷಣ, ಅದಕ್ಕೆ ಬಿದ್ದ ಶಿಳ್ಳೆ, ಚಪ್ಪಾಳೆಯ ಸದ್ದನ್ನು ಕೇಳಿದೆ. ಮಂಗಳೂರಿನ ಪೊಲೀಸರು ಹಸಿ ಹಸಿ ಭಾಷಣದ ಕುರಿತು ಇಷ್ಟೊಂದು ನಿರ್ಲಕ್ಷ ವಹಿಸಿರುವುದದರ ಹಿಂದೆ ಆಳುವವರ ನಿಗೂಢ ಹುನ್ನಾರ ಇರುವಂತಿದೆ.
ಇದೇ ಚೈತ್ರ ಗಂಗಾವತಿಯಲ್ಲಿ ಆಗಿನ ಸಚಿವ ಇಕ್ಬಾಲ್ ಅನ್ಸಾರಿ ಸೋಲಿಗೆ ಇಂತಹದ್ದೇ ಭಾಷಣದ ಮೂಲಕ ಬಳಕೆಯಾದದ್ದು. ಮೈತುಂಬಾ ಕೇಸುಗಳು ಬಿದ್ದದ್ದು. ಅಲ್ಲಿ ಬಿಜೆಪಿ ಗೆದ್ದ ನಂತರ “ಈಗ ಕೋರ್ಟು ಕಚೇರಿಗೆ ಅಲೆಯಲು ಸ್ಥಳೀಯ ಭಾಜಪ ಶಾಸಕನಾಗಲಿ, ಸಂಘ ಪರಿವಾರವಾಗಲಿ ನೆರವು ನೀಡುತ್ತಿಲ್ಲ” ಎಂದು ಅಳವತ್ತು ಕೊಂಡದ್ದು ದೊಡ್ಡ ಸುದ್ದಿಯಾಗಿತ್ತು.
ಈಗ ಐದು ವರ್ಷದ ಬ್ರೇಕ್ ಬಳಿಕ ಮೂಲೆಗುಂಪಾಗಿದ್ದ ಚೈತ್ರ ಳನ್ನು ಮತ್ತೆ ಕೋಚಿಂಗ್ ನೀಡಿ ಫೀಲ್ಡಿಗೆ ಇಳಿಲಾಗಿದೆ. ತಲವಾರು,ಸಾಬಿ, ಬ್ಯಾರಿ, ಹೊಡಿ ಕಡಿ ಮಾತುಗಳು ಪುಂಖಾನುಪಂಖವಾಗಿ ಹೊರ ಬರುತ್ತಿದೆ. ಉದ್ಯೋಗ, ಆದಾಯ ಇಲ್ಲದೆ ಹತಾಶರಾಗಿರುವ ಯುವಕರು ಮೈಮರೆತು ಶಿಳ್ಳೆ ಚಪ್ಪಾಳೆ ತಟ್ಟತೊಡಗಿದ್ದಾರೆ. ಬಡ ತಂದೆ ತಾಯಿಯರು ಎಚ್ಚರ ವಹಿಸಬೇಕು. ಬೆಳಕು ನಂದುವುದು ಬಡವರ ಮನೆಯದ್ದು. ಅದು ಹಿಂದುವಿನದ್ದು ಆಗಿರಲಿ, ಮುಸಲ್ಮಾನರದ್ದಾಗಿರಲಿ.
ಮುನೀರ್ ಕಾಟಿಪಳ್ಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.