ಕೋಲಾರ (ವಿಶ್ವಕನ್ನಡಿಗ ನ್ಯೂಸ್) : ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಗರದ ಮೆಥೋಡಿಸ್ಟ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಆರ್. ಹೇಮಾ ರವರನ್ನು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್ ಮಾತನಾಡಿ , ಅನುದಾನಿತ ಶಾಲೆಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಗಳು ಸಿಗುತ್ತಿರಲಿಲ್ಲ ಜಿಲ್ಲೆಯ ಇತಿಹಾಸದಲ್ಲಿ ಮೋದಲನೇ ಬಾರಿ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ 2020-21 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದು , 38 ವರ್ಷಗಳಿಂದ ಮೆಥೋಡಿಸ್ಟ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಆರ್ . ಹೇಮಾ ರವರು ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದು , ಅವರ ಅಪಾರ ಸೇವೆಯನ್ನು ಗುರ್ತಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿದ್ದು ತುಂಬಾ ಸಂತೋಷವಾಗಿದೆ . ಶಿಕ್ಷಕ ಪ್ರಶಸ್ತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕರ ಕಚೇರಿಯ ಹಿರಿಯ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ , ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಆರ್ . ಹೇಮಾ ಹಾಗೂ ಸೆಂಟೆನ್ಸ್ ಅನುದಾನಿತ ಶಾಲೆಯ ಶಿಕ್ಷಕಿ ಸುಜಾತ ಹಾಗೂ ರಮೇಶ್ ರವರ ಮಗಳಾದ ಗಾನಕೋಗಿಲೆ ಪ್ರಖ್ಯಾತಿ ಪಡೆದ ಕುಮಾರಿ ರಕ್ಷಾ ರಮೇಶ್ ಮತ್ತು ಜ್ಞಾನಮಂದಿರ ತಲಗುಂದ ಶಾಲೆಯ , ಗೃಹರಕ್ಷಕ ದಳದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಪಡೆದ ಶಿಕ್ಷಕ ಮಾರುತಿ ರವರನ್ನು ಅಭಿನಂದಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮೆಥೋಡಿಸ್ಟ್ ಸಂಸ್ಥೆಯ ಉಪಾಧ್ಯಕ್ಷ ರೆವೆರೆಂಟ್ ಶಾಂತಕುಮಾರ್ , ಪಾಸ್ಟರ್ ಜಯವಂತ್ ಏಲೀಯ , ಹಾಸ್ಟೆಲ್ ಮೇಲ್ವಿಚಾರಕಿ ಸುಜಾತ , ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಬೀರ್ ಅಹ್ಮದ್ , ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಬಿ.ಆರ್.ಪಿ ನಾಗರಾಜ್ , ಗೋಪಾಲಕೃಷ್ಣ ಎಂ ಆರ್ , ವೆಂಕಟರಾಮ್ , ಬಿಇಓ ಕಚೇರಿಯ ಅಧೀಕ್ಷಕರಾದ ಗಿರೀಶ್ , ಬಿಂದು , ಸಿಬ್ಬಂದಿ ವರ್ಗದವರಾದ ಶ್ರೀನಿವಾಸ್ ಮೂರ್ತಿ ಆರ್ , ಜೈ ಶಂಕರ್ ಪ್ರಸಾದ್ , ಸುದರ್ಶನ್ , ಸುಬ್ರಮಣಿ , ಎಲ್ಲಮ್ಮ ವಿನಯ್ ಕುಮಾರ್ , ರಿಯಾಜ್ ಅಹ್ಮದ್ , ಭಾರದ್ವಾಜ್ , ಶಿಕ್ಷಕರಾದ ವೆಂಕಟೇಶ್ , ಸಿ.ಆರ್.ಪಿ ಜಮೀಲ್ , ಸುಬ್ರಮಣಿ , ಮಂಜುನಾಥ , ಶಿಕ್ಷಕರ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಶಿವಕುಮಾರ್ , ಜಿಲ್ಲಾ ಉಪಾಧ್ಯಕ್ಷ ರಮೇಶ್ , ತಾಲೂಕು ಪ್ರಧಾನ ಕಾರ್ಯದರ್ಶಿ ಧನಂಜಯ್ , ಖಜಾಂಚಿ ಜನಾರ್ಧನ , ಸುರೇಶ್ , ನಾರಾಯಣಸ್ವಾಮಿ , ತಾಲೂಕು ಉಪಾಧ್ಯಕ್ಷ ಪ್ರಕಾಶ್ ಅರುಣೋದಯ ಪ್ರಕಾಶ್ , ಶಂಕರ್ನಾಗ್ , ಬೈರೆಗೌಡ , ಬಾಲಾಜಿ , ಜಮೀಲ್ ಪಾಷ , ರಫೀವುಲ್ಲಾ ಖಾನ್ , ಮೆಥೋಡಿಸ್ಟ್ ಹಿರಿಯ ಪ್ರಾಥಮಿಕ ಶಿಕ್ಷಕರಾದ ಸುನೀತಾ , ಸಾಲ್ಡೀನ್ , ಕಾಂತ , ಆಶಾ , ಕಿರಣ್ , ಪ್ರಮೀಳ ಕುಮಾರ್ , ದೈಹಿಕ ಶಿಕ್ಷಕ ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.