ರಾಯಲ್ಪಾಡು (ವಿಶ್ವಕನ್ನಡಿಗ ನ್ಯೂಸ್): ರೈತರು ರೈತರು ಕೃಷಿ ಜೊತೆಗೆ ಉಪ ಕಸುಬುಗಳನ್ನುಕೃಷಿ ಜೊತೆಗೆ ಉಪ ಕಸುಬುಗಳನ್ನು ಕೈಗೊಂಡರೆ ರೈತರು ಆರ್ಥಿಕವಾಗಿ ಸ್ವಾವಲಂಭಿಗಳಾಗಬಹುದು ಎಂದು ಸಂಗಮ್ ಡೈರಿಯ ವ್ಯವಸ್ಥಾಪಕ ವೈ.ಜಿ.ನಾಗರಾಜು ಹೇಳಿದರು. ತಿಮ್ಮರಾಜಪಲ್ಲಿ ಗ್ರಾಮದ ಸಂಗಮ್ ಡೈರಿವತಿಯಿಂದ ಡೈರಿಯ ಪಲಾನುಭವಿಗಳಿಗೆ ಬೋನಸ್ ಚೆಕ್ನ್ನು ವಿತರಿಸಿ ಮಾತನಾಡಿದರು.
ರೈತರು ಕೃಷಿ ಚಟುವಟಿಕೆಯೊಂದಿಗೆ ಪಶುಪಾಲನೆ ಕೈಗೊಂಡರೆ ಆದಾಯ ಇಮ್ಮಡಿಯಾಗುತ್ತದೆ. ಈ ನಿಟ್ಟಿನಲ್ಲಿ ಪಶುಪಾಲನೆ ಕಡೆಗೆ ವಿಶೇಷ ಗಮನ ಹರಿಸುವ ಜೊತೆಗೆ ಪಶುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗ , ಜಂತುಹುಳು ರೋಗಗಳಿಗೆ ತಡೆಗಟ್ಟುವ ವಿಧಾನಗಳ ಅರಿತುಕೊಳ್ಳುವುದು ಹಾಗು ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕೆಂದು ತಿಳಿಸಿದರು. ಸಂಗಮ್ ಡೈರಿ ಅಧ್ಯಕ್ಷ ನರೇಂದ್ರಕುಮಾರ್ ಮಾರ್ಗದರ್ಶನದಂತೆ ೧ ವರ್ಷಕ್ಕೆ ಪ್ರತಿ ಲೀಟರ್ಗೂ ೨ ರೂ ದರದಲ್ಲಿ ಬೋನಸ್ ನೀಡಲಾಗುವುದು ಹಾಗೂ ಕೊರೋನದಿಂದ ಬಾಧಿಸುತ್ತಿರುವ ಪಲಾನುಭವಿಗಳಿಗೆ ೧ ತಿಂಗಳ ಹೆಚ್ಚಿನ ಬೋನಸ್ ನೀಡಲಾಗುತ್ತಿದೆ ಅಲ್ಲದೆ ವಾರಕೊಮ್ಮೆ ಹೆಲ್ಲಕ್ಯಾಂಪ್ ಮಾಡಿಸಲಾಗುವುದು ಎಂದರು.
ಶಿಮ್ಮರಾಜಪಲ್ಲಿ , ಅಪ್ಪಿಕೊಂಡದೇಪಲ್ಲಿ , ಕರಿವೀರರೆಡ್ಡಿಪಲ್ಲಿ ಗ್ರಾಮಗಳ ಡೈರಿಯ ಪಲಾನುಭವಿಗಳಿಗೆ ಬೋನಸ್ ಚೆಕ್ಗಳನ್ನು ವಿತರಿಸಲಾಯಿತು . ಎನ್.ಆರ್.ಮಧುಸೂದನರೆಡ್ಡಿ , ಟಿ.ವೇಲು , ಶದ್ದೀನ್ , ಲೆಲಿನ್ಬಾಬು , ಅನಿಲ್ ಸಿಬ್ಬಂದಿಗಳಾದ ಹಾಗು ಇತರರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.