ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ನ ಸದಸ್ಯರಾದ ಮೌಲಾನ ಶಾಫಿ ಸಹದಿಯವರು ಪುತ್ತೂರು ಕಮ್ಯೂನಿಟಿ ಸೆಂಟರ್ ಗೆ ಬೇಟಿ ಕೊಟ್ಟು ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು. ಶೈಕ್ಷಣಿಕ ಪ್ರಗತಿಗಾಗಿ ಸಮುದಾಯ ಮಾಡಬಹುದಾದ ರಚನಾತ್ಮಕ ಯೋಜನೆಗಳ ಮಾದರಿಯನ್ನು ರೂಪಿಸುತ್ತಿರುವ ಸೆಂಟರ್ ರಾಜ್ಯದ ಎಲ್ಲೆಡೆ ನಿರ್ಮಾಣಗವಾಗಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕಳೆದ ನಾಲ್ಕು ತಿಂಗಳ ಅವದಿಯ ಸಂಸ್ಥೆಯ ಚಟುವಟಿಕೆಯ ಮಾಹಿತಿ ಪ್ರತೀ ದಿನವು ಸ್ವೀಕರಿಸುತ್ತಿದ್ದೇನೆ. ಅದಕ್ಕೆ ಬೇಕಾದ ಮಾರ್ಗದರ್ಶನ- ಸಲಹೆ -ಸೂಚನೆ ನೀಡುತ್ತಿದ್ದೇನೆ ಎಂದರು. ಈ ಮಾದರಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ, ಇದನ್ನು ಎಲ್ಲೆಡೆ ಅನುಷ್ಠಾನಗೊಳಿಸುವುದಕ್ಕೆ ಸಂಪೂರ್ಣ ನೆರವು ನೀಡುತ್ತೇವೆ, ಪದ್ದತಿಯು ಪ್ರಯೋಗದಲ್ಲೇ ಭರವಸೆ ಮೂಡಿಸಿದೆ ಎಂದರು.
ಕೆ.ಸಿ.ಎಫ್ ಇದರ ಅಂತರಾಷ್ಟ್ರೀಯ ಅಧ್ಯಕ್ಷರಾದ ಡಾ.ಶೇಕ್ ಬಾವಾ. ಮರ್ಕಝ್ ಕುಂಬ್ರ ಇದರ ಗೌರವಾಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ, ಎಸ್.ಎಂ ಬಶೀರ್ ಹಾಜಿ ಶೇಖಮಲೆ. ಎಂ.ಎಸ್.ಮಹಮ್ಮದ್, ಮಹಮ್ಮದ್ ಕುಕ್ಕುವಳ್ಳಿ, ಅಡ್ವಕೇಟ್ ಶಾಕೀರ್ ಹಾಜಿ. ಅಸ್ರಫ್ ಕಿನಾರ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.