ಸಿದ್ದಾಪುರ(www.vknews.in): SKSSF ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಶೈಖುನಾ ಪೂಕ್ಕಳಂ ಅಬ್ದುಲ್ಲಾ ಮುಸ್ಲಿಯಾರ್ ಅನುಸ್ಮರಣೆ ಮತ್ತು SKSSF ಕೊಡಗು ಜಿಲ್ಲೆ ಹಾಗೂ GCC ಕೊಡಗು ಸಮಿತಿಯ ಪ್ರತಿನಿಧಿ ಸಂಗಮ ಸಿದ್ದಾಪುರ ವರಕ್ಕಲ್ ಸ್ಮಾರಕ ಸೌಧದಲ್ಲಿ ದಿನಾಂಕ 06.10.2021 ಬುಧವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಪುಣ್ಯ ರಬೀವುಲ್ ಅವ್ವಲ್ ತಿಂಗಳಲ್ಲಿ ಜಿಲ್ಲಾ, ವಲಯ ಹಾಗೂ ಶಾಖಾ ಮಟ್ಟದಲ್ಲಿ ಮದೀನಾ ಪಾಷನ್, ನಾನು ಅರಿತ ಪ್ರವಾದಿ, ಸ್ನೇಹ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ದೇಶಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ವಹಿಸಿದ್ದರು. ಪೂಕಳಂ ಉಸ್ತಾದ್ ಅನುಸ್ಮರಣೆ ಭಾಷಣವನ್ನು ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ನೌಶಾದ್ ಫೈಝಿ ಮಾಡಿದರು. SKSSF ಕೇಂದ್ರ ಸಮಿತಿ ಸದಸ್ಯರಾದ ಇಕ್ಬಾಲ್ ಮೌಲವಿ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೆ SYS ಕೊಡಗು ಜಿಲ್ಲಾ ಕೋಶಾಧಿಕಾರಿ ಉಮರ್ ಫೈಝಿ, SKSSF GCC ಕೊಡಗು ಪ್ರ.ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಉಪಾಧ್ಯಕ್ಷರಾದ ಝೈನುದ್ದೀನ್ ಉಸ್ತಾದ್ ಹಿತ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ SKSSF ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿ ಆರಿಫ್ ಫೈಝಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಅಬೂಬಕರ್ ಸಿದ್ದೀಖ್ ಹಾಜಿ,ಸಜೀರ್ ಪೊನ್ನಂಪೇಟೆ,ಸಿದ್ದೀಖ್ ವಾಫಿ, ರಫೀಖ್ ಬಾಖವಿ,ಸಅದ್ ಫೈಝಿ, ತೌಫೀಖ್ ದಾರಿಮಿ, ಮುಹಮ್ಮದಲಿ,ರಶೀದ್, ಬಶೀರ್ ಕೊಂಡಂಗೇರಿ ಹೀಗೆ ಹಲವು ಉಲಮಾ, ಉಮರಾ ನೇತಾರರು ಭಾಗವಹಿಸಿದ್ದರು. SKSSF ಕೊಡಗು ಜಿಲ್ಲಾ ಪ್ರ.ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ ಸ್ವಾಗತಿಸಿ, ಜಂಶೀರ್ ವಾಫಿ ವಂದಿಸಿದರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.