ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಮೊಟ್ಟ ಮೊದಲ ಬಾರಿಗೆ ವಿಜಯದಶಮಿಯ ಪವಿತ್ರದಿನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್) ವತಿಯಿಂದ ಗ್ರಾಮದ ರಾಜಬೀದಿಗಳಲ್ಲಿ ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ ಹಾಗೂ ಪ್ರಮುಖ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಾರಂಭಕ್ಕೆ ಮುನ್ನಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಮಾಯಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು ಅಭ್ಯಾಸದ ನಂತರ ಎಲ್ಲಾರು ಒಂದೆಂಡೆ ಸೇರಿ ನಂತರ ಲಕ್ಕೂರು ಬಸ್ ನಿಲ್ದಾಣ, ನಾಡಕಚೇರಿ ರಸ್ತೆ, ರಥಬೀದಿ, ಶ್ರೀರಾಮ ದೇವಾಸ್ಥಾನದ ಬೀದಿ, ಆಂಜನೇಯ ಸ್ವಾಮಿ ದೇವಾಲಯದ ರಸ್ತೆ, ಸೇರಿದಂತೆ ಅಂತಿಮವಾಗಿ ಲಕ್ಕೂರು ಗ್ರಾಮ ಪಂಚಾಯಿತಿ ಸಮೀಪ, ಬಾಲಾಜಿ ಕಲ್ಯಾಣ ಮಂಟಪ್ಪದ ಮುಂಭಾಗ ಜಮಾಯಿಸಿದ್ದ ಗಣವೇಷಧಾರಿಗಳು ಒಂದೆಂಡೆ ಎಲ್ಲಾರೂ ಸೇರಿ ವಿಜಯದಶಮಿ ನಿಮಿತ್ತ ಬಹಿರಂಗ ಸಭೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತುಮಕೂರು ವಿಭಾಗದ ಪ್ರಚಾರಕರಾದ ಶಂಕರ್ ನಾಯಕ್ ರವರು ಮಾತನಾಡಿ “ವಿಜಯದಶಮಿಯ ಉತ್ಸಾವವನ್ನು ನಾವು ಸತ್ಯದ, ನ್ಯಾಯದ ಪ್ರತೀಕವಾಗಿ ಆಚರಿಸುವುದು ವಾಡಿಕೆ. ನಾವು ವಿಜಯದಶಮಿಯ ದಿನ ನಮ್ಮೊಳಗೆ ಇರುವ ರಾಕ್ಷಸ ಗುಣವನ್ನು ನಾಶ ಮಾಡಬೇಕು. ನಮ್ಮಲ್ಲಿ ಅನೇಕ ದೋಷಗಳಿವೆ ಅದನ್ನು ನಾಶ ಮಾಡುವ ಪ್ರಕ್ರಿಯೆ ಪ್ರಮುಖ. ದೇವತಾ ಗುಣವನ್ನು ಪೋಷಣೆ ಮಾಡಬೇಕು ಆಗ ಮಾತ್ರ ಭಾರತ ಸದೃಡವಾಗುತ್ತದೆ. ಅಲ್ಲಾ, ಯೇಸು, ಈಶ್ವರ, ಎಲ್ಲಾ ಒಂದೇ ಎಂದೇಳಿದ ಏಕೈಕ ಸಮಾಜ ಹಿಂದೂ ಸಮಾಜ ನಮ್ಮ ಸಮಾಜ ಸಾವಿಲ್ಲದ ಸಮಾಜವಾಗಿದೆ.
ಹಾಗೇ ಇವತ್ತೀನ ಆಧುನಿಕ ಯುಗದಲ್ಲಿ ಹುಟ್ಟಿದ ಕಾರಣ, ಅದರ ನೆಪ ಒಡ್ಡಿ ನಾನು ಶ್ರೇಷ್ಠ, ನೀನು ಕನಿಷ್ಟ ಎಂಬ ಭೇದವ ಬಿಟ್ಟು, ಜಾತಿಯಿಂದ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಟರಲ್ಲ, ಒಂದು ರಾಷ್ಟ್ರ ಚೆನ್ನಾಗೀರಬೇಕು ಅಂದರೆ, ಮಾಡುವ ತಪ್ಪುಗಳನ್ನು ತಿದ್ದಿಕೊಂಡು ಹೋಗುವುದೇ ಹಿಂದೂ ಸಮಾಜದ ಪ್ರಮುಖ ಆಶಯ ಆಗಿದೆ. ವಿಜಯದಶಮಿಯ ಸಂಕಲ್ಪ ಮೇಲು-ಕೀಳು ಎಂಬ ಭೇದ ನಾಶವಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಶಪಥ ಮಾಡಬೇಕು” ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ರಾಜೇಶ್ ರವರು ಮಾತನಾಡಿ “ದೇಶಕ್ಕಾಗಿ ಮತ್ತು ದೇಶದ ಒಳಿತಿಗಾಗಿ ಸಂಘ ಸ್ಥಾಪನೆಯಾಗಿದೆ. ಅಸ್ಪೃಶ್ಯತೆಯನ್ನು ಸಮಾಜಕ್ಕೆ ಅಂಟಿದ ಕಳಂಕ. ಸಂಘಕ್ಕೆ ಬರುವ ಸ್ವಯಂ ಸೇವಕರ ಜಾತಿ, ಮತ, ಅಂತಸ್ತು, ವಯಸ್ಸು ಕೇಳುವುದಿಲ್ಲ. ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸಲು ಸಂಘ ಯಶಸ್ವಿಯಾಗಿದೆ. ಅಸ್ಪಶ್ಯತೆ ಒಂದು ಪಾಪ. ಆ ಪಾಪವನ್ನು ಕಳೆಯದೇ ಇದ್ದರೆ ಸಮಾಜಕ್ಕೆ ಮೋಕ್ಷವಿಲ್ಲ. ಸಮಾಜಕ್ಕೆ ಏನಾದರೂ ಮಾಡ ಬಲ್ಲೆ ಎನ್ನವವನು ಸ್ವಯಂ ಸೇವಕ. ನಿತ್ಯ ಶಾಖೆಗಳಲ್ಲಿ ಸ್ವಯಂ ಸೇವಕರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ. ಜಾತಿ, ಮತ, ಪಂಥವೆನ್ನದೆ ದೇಶದ ಅಭಿವೃದ್ಧಿಗಾಗಿ ದುಡಿ ಯುವ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೇಶಕ್ಕೆ ಅಪಾಯ ಬಂದಾಗ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುವವರು ಸ್ವಯಂ ಸೇವಕರು” ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಗಣವೇಷಧಾರಿಗಳಾಗಿ ಸರಿ ಸುಮಾರು 150 ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಲಕ್ಕೂರಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿದರು, ಅಲ್ಲಲ್ಲಿ ಗಣವೇಷಧಾರಿಗಳ ಮೇಲೆ ವಿವಿಧ ಹೂಗಳಿಂದ ಪುಷ್ಪನಮನ ಸಲ್ಲಿಸುತ್ತಾ, ಘೋಷಣೆಗಳನ್ನು ಮೊಳಗಿಸುತ್ತಿದ್ದು ವಿಶೇಷವಾಗಿತ್ತು.
ಬಹಿರಂಗ ಸಭೆಯ ಕಾರ್ಯಕ್ರಮದಲ್ಲಿ ಮಾಲೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀನಿವಾಸ್ (ತಬಲ ನಾರಾಯಣಪ್ಪ, ಸೂರ್ಯನಾರಾಯಣ್, ಅಪ್ಪಿ (ತಬಲ ನಾರಾಯಣಪ್ಪ), ಸಮಾಜ ಸೇವಕ ಹೂಡಿ ವಿಜಯ್ ಕುಮಾರ್, ಬಿಜೆಪಿ ಮುಖಂಡ ಆರ್.ಪ್ರಭಾಕರ್, ಬಿಜೆಪಿ ಮಾಜಿ ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್, ಅಮರಾವತಿ, ಶ್ರೀವಳ್ಳಿ, ಲಕ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೇತನ್ ಗೌಡ, ಮಾಜಿ ಗ್ರಾಂ.ಸದಸ್ಯ ಸುರೇಶ್ ರೆಡ್ಡಿ, ಲಕ್ಷ್ಮೀ ರಮೇಶ್, ಅರುಣ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪದ್ಮಾವತಿ ನಾರಾಯಣಸ್ವಾಮಿ, ಸರ್ಕಲ್ ಇನ್ಸಪೆಕ್ಟರ್ ಮಾರ್ಕೋಂಡಪ್ಪ, ಸಬ್ ಇನ್ಸಪೆಕ್ಟರ್ ಅನೀಲ್ ಕುಮಾರ್, ನೂರಾರು ಪೋಲಿಸ್ ಸಿಬ್ಬಂದಿಗಳು, ಅನೇಕ ಬಿ.ಜೆ.ಪಿ ಮುಖಂಡರು, ಆರ್.ಎಸ್.ಎಸ್ ಪ್ರಮುಖರು, ಲಕ್ಕೂರು ಸುತ್ತಮುತ್ತಲಿನ ಯುವಕರು, ಗ್ರಾಮಸ್ಥರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.