ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ವಿಜಯದಶಮಿಯ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್) ವತಿಯಿಂದ ರಾಜ ಬೀದಿಗಳಲ್ಲಿ ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ ಹಾಗೂ ಬಹಿರಂಗ ಸಭ್ಹೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಒಂದು ಸಭೆಗೆ ಹಾಗೂ ಪಥಸಂಚಲನಕ್ಕೆ ನೂರಾರು ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳ ಸರ್ಪಗಾವಲು ಹಾಕಿರುವುದಾದರೂ ಏತಕ್ಕಾಗಿ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಲಕ್ಕೂರು ಗ್ರಾಮದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ 100 ಕ್ಕೂ ಅಧಿಕ ಪೊಲೀಸರು, 1 ಡಿ.ವೈ.ಎಸ್ಪಿ, 4 ಜನ ಸರ್ಕಲ್ ಇನ್ಸಪೆಕ್ಟರ್, 1 ಸಬ್ ಇನ್ಸಪೆಕ್ಟರ್ ಸೇರಿದಂತೆ ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಿದ್ದು ಜನರಿಗೆ ಪಥಸಂಚಲನ ಹಾಗೂ ಬಹಿರಂಗ ಸಭೆಯಲ್ಲಿ ಎದ್ದು ಕಾಣುತ್ತಿತ್ತು.
ಕೆಲವು ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ ಅವರು “ಶಾಂತಿ ಹಾಗೂ ಸೌಹರ್ದತೆಯ ದೃಷ್ಟಿಯಿಂದ ಹಾಗೂ ಮೇಲಾಧಿಕಾರಿಗಳ ಆದೇಶದಂತೆ ನಾವು ಲಕ್ಕೂರು ಗ್ರಾಮದಲ್ಲಿ ಭದ್ರತೆ ನೀಡಿರುವುದಾಗಿ” ತಿಳಿಸುತ್ತಾರೆ. ಪೊಲೀಸ್ ಅಧಿಕಾರಿಗಳು ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂಬ ಉದ್ದೇಶ ಆದ್ರೂ ಸರಿ ಆದರೆ ಇಷ್ಟು ಸಂಖ್ಯೆಯಾದರೂ ಏತಕ್ಕಾಗಿ ಎಂಬುದು ಇನ್ನೂ ಸಹ ಲಕ್ಕೂರಿನ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಸುದ್ದಿ ಕೇಳಿಬರುತ್ತಿದೆ.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.