(www.vknews.com) : “ಸ್ವಸ್ಥ ಜಗತ್ತಿನ ಪ್ರವಾದಿ” ಎಂಬ ಘೋಷ ವಾಕ್ಯದಡಿ ಕೆ.ಸಿ.ಎಫ್ ಬಹರೈನ್ ಅಯೋಜಿಸಿದ ಇಶ್ಖ್ ಎ ರಸೂಲ್ (ﷺ) ಮೀಲಾದ್ ಕಾನ್ಫರೆನ್ಸ್-2021 ಝೂಂ ಓನ್ ಲೈನ್ ಮುಖಾಂತರ ಯಶಸ್ವಿಯಾಗಿ ನಡೆಯಿತು.ರಾಷ್ಟ್ರೀಯ ಸಮಿತಿ ಅ ದ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಅಸ್ಸಯ್ಯಿದ್ ಅಲೀ ಬಾಫಖಿ ತಂಙಳ್ ರವರು ದುವಾಶೀರ್ವಚನ ನಡೆಸಿದರು.
ಮದನೀಯಂ ಸ್ವಲಾತ್ ಮುಖಾಂತರ ಜನ ಸಾಗರದ ಮನ ಗೆದ್ದ ಅಬುಲ್ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣಗೈದರು. ಸತ್ಯ ವಿಶ್ವಾಸಿಗಳ ಪಾಲಿಗೆ ಮದೀನಾ ಅಭಯ ಕೇಂದ್ರವಾಗಿದ್ದು, ಮುತ್ತು ನಬಿ( ﷺ) ರವರ ಚರ್ಯೆಯನ್ನು ಪಾಲಿಸುವುದೇ ನಮ್ಮ ಇಹ ಪರ ವಿಜಯಕ್ಕೆ ಇರುವ ರಹದಾರಿ ಎಂದು ಕರೆ ನೀಡಿದರು.
ಕೆ.ಸಿ.ಎಫ್ ಬಹರೈನ್ ನೋರ್ತ್ ಝೋನ್ ಅಧ್ಯಕ್ಷರಾದ ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿಯವರ ದುವಾದೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ,ದರ್ವೆಶ್ ಮುಹಮ್ಮದ್ ಅಲಿ ಖಿರಾಅತ್ ಪಠಿ ಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತ ಭಾಷಣವನ್ನು ಮಾಡಿದರು.ಕೆ.ಸಿ.ಎಫ್ ಐಎನ್ಸಿ ಅಧ್ಯಕ್ಷರಾದ ಡಾ.ಶೈಖ್ ಬಾವ ಸಮಾರಂಭವನ್ನು ಉದ್ಘಾಟಿಸಿದರು.
ಬಹರೈನ್ ಐ.ಸಿ.ಎಫ್ ಅಧ್ಯಕ್ಷರಾದ ಝೈನುದ್ದೀನ್ ಸಖಾಫಿ,ಕೆ.ಸಿ.ಎಫ್ ಬಹರೈನ್ ಐಎನ್ಸಿ ಕೌನ್ಸಿಲರ್ ಬಶೀರ್ ಕಾರ್ಲೆ, ನೋರ್ತ್ ಝೋನ್ ಕೋಶಾಧಿಕಾರಿ ಇಬ್ರಾಹಿಂ ಸಅದಿ,ಉರ್ದು ವಿಂಗ್ ಚೇರ್ಮ್ಯಾನ್ ಗಯಾಝುದ್ದೀನ್ ಮೈಸೂರು, ಬಹರೈನ್ ಫಿಲಾಂತ್ರೊಪಿಕ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ. ಹಸನ್ ಕಮಾಲ್ ಶುಭ ಹಾರೈಸಿದರು. ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ನಿರೂಪಣೆ ಗೈದು, ಶಿಕ್ಷಣ ವಿಭಾಗದ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ಕೃತಜ್ಞತೆ ಸಲ್ಲಿಸಿದರು.ಮಂಖೂಸ್ ಮೌಲಿದ್ ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಯಾ ಅಕ್ರಮ ಬೈತ್ ನೊಂದಿಗೆ ಕೊನೆಗೊಂಡಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.