ಮಂಗಳೂರು (www.vknews.com) : ಕದ್ರಿಯ ವಿಹಿಂಪ ಕಚೇರಿಯಲ್ಲಿ ಗುರುವಾರದಂದು ನಡೆದ ಆಯುಧ ಪೂಜೆ ಕಾರ್ಯಕ್ರಮದ ನೆಪವೊಡ್ಡಿ ಅದರ ಕಾರ್ಯಕರ್ತರಿಗೆ ತ್ರಿಶೂಲ ವಿತರಣೆ ಮಾಡಿದ್ದು ತೀವ್ರ ಆಕ್ಷೇಪನೀಯ ಎಂದು ಜೆಡಿಎಸ್ ಮುಖಂಡ ಇಕ್ಬಾಲ್ ಅಹ್ಮದ್ ಮುಲ್ಕಿ ತಿಳಿಸಿದ್ದಾರೆ.
ಶಾಂತಿಯಿಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಬಂದ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ, ಅವಶ್ಯಕತೆಯಿದ್ದ ಸಂಧರ್ಭದಲ್ಲಿ ಜಾತಿ ಮತ-ಭೇದವನ್ನು ತೋರಿಸದೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತ, ರೇಷನ್ ಕಿಟ್ ಗಳನ್ನು ವಿತರಿಸುತ್ತ ಅನ್ಯೋನ್ಯವಾಗಿ ಇದ್ದರು. ಆದರೆ ಇತ್ತೀಚಿನ ಕೆಲವು ಸಮಯಗಳಿಂದ ಕೆಲವು ದುಷ್ಟ ಶಕ್ತಿಗಳು ಅನೈತಿಕ ಪೊಲೀಸ್’ಗಿರಿ, ಅನ್ಯಧರ್ಮದ ಅವಹೇಳನ, ಒಂದು ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಹಲ್ಲೆ ಹೀಗೇ ಶಾಂತಿ ಕೆದಡುವ ಪ್ರಯತ್ನ ದಿನನಿತ್ಯ ಮಾಡುತ್ತಿದೆ. ಅದರ ಮುಂದುವರಿದ ಭಾಗವಾಗಿ ಈಗ ವಿಹಿಂಪ ಕಚೇರಿಯಲ್ಲಿ ತ್ರಿಶೂಲ ವಿತರಣೆ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಜನರಲ್ಲಿ ಮನೋಧೈರ್ಯ ತುಂಬುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಇದೆ. ಈಗ ನಡೆದಿರುವ ಜನತೆ ಭಯಭೀತರಾಗುವಂತಹ ತ್ರಿಶೂಳ ವಿತರಣೆ ಕಾರ್ಯಕ್ರಮ ಖಂಡನೀಯ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ ಶೀಘ್ರವೇ ಮಾರಾಕಾಯುಧ ತ್ರಿಶೂಲ ವಿತರಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವಿತರಿಸಲಾದ ಆ ಮಾರಕಾಯುಧವನ್ನು ಕಂಡುಹಿಡಿದು ಜಫ್ತಿ ಮಾಡಬೇಕೆಂದು ಇಕ್ಬಾಲ್ ಮುಲ್ಕಿ ಜಿಲ್ಲಾಡಳಿತವನ್ನು ಅಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.