ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ, ಬಸ್ ನಿಲ್ದಾಣದಲ್ಲಿನ ನಿರ್ಗತಿಕರಿಗೆ, ರಸ್ತೆ-ಹದಿಬದಿಯಲ್ಲಿನ ಜನರಿಗೆ ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಉಪಾಧ್ಯಕ್ಷರಾದ ಲಕ್ಕೂರಿನ ಉಮೇಶ್ ಗೌಡ ರವರ ಹುಟ್ಟುಹಬ್ಬದ ಪ್ರಯುಕ್ತ ಇಂದು ನೂರಾರು ಜನರಿಗೆ ಅನ್ನ, ನೀರು ನೀಡುವ ಕಾರ್ಯವನ್ನು ಮಾಡಲಾಯಿತು.
ಹುಟ್ಟುಹಬ್ಬವನ್ನು ಆಚರಿಸಿಕೊಂಡ ಲಕ್ಕೂರಿನ ಉಮೇಶ್ ಗೌಡ ರವರು ಮಾತನಾಡುತ್ತಾ “ಅಸಹಾಯಕರಾಗಿರುವ ಬಡವರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ, ದಾರಿಹೋಕರಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟ ನೀಡುವ ಉತ್ತಮ ಕಾರ್ಯದ ಮೂಲಕ ವಿಶ್ವಮಾನವ ಕುವೆಂಪು ಫೌಂಡೇಶನ್ ನನ್ನ ಹುಟ್ಟುಹಬ್ಬ ಆಚರಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ನಾವು ಸದಾ ಬಡವರ ಸೇವೆ ಮಾಡುತ್ತಾ, ಹಸಿದವರಿಗೆ ಊಟ ನೀಡಿ ಹಸಿವು ನಿಗಿಸುವ ಕೆಲಸ ಮಾಡುವ ಕಾರ್ಯಗಳಿಗೆ ಪ್ರತಿಯೋಬ್ಬರು ಸಹಕಾರ ನೀಡುವ ಮೂಲಕ ಎಲ್ಲಾರೂ ಕೈ ಜೋಡಿಸಿ ಎಂದು ವಿನಂತಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ರಾಯಭಾರಿಗಳಾದ ಸೈಯದ್ ಇಮ್ರಾನ್ ರವರು ಮಾತನಾಡಿ “ನಮ್ಮ ಫೌಂಡೇಶನ್ ಇದುವರೆಗೂ ಸಾವಿರಾರು ಜನರಿಗೆ ರಕ್ತದಾನ ಮಾಡಿಸಿ ಅನೇಕ ಜನರಿಗೆ ಜೀವ ರಕ್ಷಕ ಸಂಸ್ಥೆಯಾಗಿ ರಾಜ್ಯಕ್ಕೆ ಚಿರಪರಿಚಿತ ಇರುವುದು ನಮಗೆಲ್ಲಾ ಬಹಳ ಹೆಮ್ಮೆ. ಸದಾ ಒಂದಾಲ್ಲ ಒಂದು ಉತ್ತಮ ಸೇವೆ ಮಾಡುತ್ತಾ ಜನಮುಖಿಯಾಗಿ ಬೆಳವಣಿಗೆ ಆಗುತ್ತಿರುವುದಕ್ಕೆ ಶುಭ ಹಾರೈಸಿದರು.
ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಸಂಚಾಲಕರಾದ ದೊಡ್ಡಕಲ್ಲಹಳ್ಳಿ ಮಂಜುನಾಥ್ ಮಾತನಾಡಿ ” ಹಸಿವಿನದಾಹ ನಿಗಿಸುವ ಅತಿ ಅಮೂಲ್ಯವಾದ ಸೇವೆ ನಿರಂತರವಾಗಿ ಮಾಡುತ್ತಾ, ಕತ್ತಲಿನ ಕೂಪದಲ್ಲಿರುವವರಿಗೆ ಬೆಳಕು ನೀಡುವ ಹಾದಿಯಲ್ಲಿ ಸಾವಿರಾರು ಮಂದಿ ನೇತ್ರದಾನ ಮಾಡಿಸುತ್ತಾ, ಆಪತ್ತಿನಲ್ಲಿರುವ ರೋಗಿಗಳಿಗೆ ರಕ್ತ ನೀಡಿ ಜೀವ ಉಳಿಸುತ್ತಾ ಸದಾ ಸಮಾಜಸೇವೆಯ ಮೂಲಕ ಮೂರು ರಾಜ್ಯಗಳಲ್ಲಿ ಸೇವೆ ಮಾಡುತ್ತಿರುವ ನಮ್ಮ ಸಂಸ್ತೆಯ ಉತ್ತಮ ಕಾರ್ಯ ಶ್ಲಾಘನೀಯ. ಹುಟ್ಟುಹಬ್ಬದಲ್ಲಿ ನೂರಾರು ಜನರಿಗೆ ಅನ್ನ. ನೀರು ನೀಡುವುದು ಪ್ರಮುಖ ಕಾರ್ಯ” ಎಂದರು.
ಈ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ರಾಜ್ಯ ಸಂಚಾಲಕ ದೊಡ್ಡಕಲ್ಲಹಳ್ಳಿ ಮಂಜುನಾಥ್, ರಾಜ್ಯ ರಾಯಭಾರಿ ಸೈಯದ್ ಇಮ್ರಾನ್, ಹಾಗೂ ಅನೇಕ ವಿಶ್ವಮಾನವ ಕುವೆಂಪು ಫೌಂಡೇಶನ್ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.