ಬಂಗಾರಪೇಟೆ (ವಿಶ್ವ ಕನ್ನಡಿಗ ನ್ಯೂಸ್) : ಸತತವಾಗಿ ಬಂಗಾರಪೇಟೆ ತಾಲ್ಲೂಕು 15 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಮತ್ತು ಮೂರು ವರ್ಷಗಳಿಂದ ಕೊರೆನಾ ಹಾವಳಿಗೆ ಒಳಗಾಗಿ ರೈತರು , ಕಾರ್ಮಿಕರು , ಬಡವರು , ಒಪತ್ತಿನ ಊಟಕ್ಕೆ ದುಡಿಯುವ ಕೂಲಿ ಕೆಲಸವೂ ಸಹ ಸರ್ಕಾರ ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ( ಕೆ.ಎಸ್.ಪುಟ್ಟಣ್ಣಯ್ಯ ಬಣ ) ದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಅವರು ಆಹಾರ ಶಿರಸ್ತಾಧಾರ್ ಅಭಿಜಿತ್ , ಗೋಪಾಲ್ ಹಾಗೂ ಮುತ್ತಮ್ಮ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು .
ಈ ವೇಳೆ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ , ಇಂತಹ ಸಂದರ್ಭದಲ್ಲಿ ಬಂಗಾರಪೇಟೆ ತಾಲ್ಲೂಕಿನಾದ್ಯಂತ ಸುಮಾರು ನೂರು ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿರುವ ಸರ್ಕಾರದ ಬಡವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುವ ಕೆಲಸ ಮಾಡುತ್ತಿದೆ . ನೆಪಕ್ಕೆ ಮಾತ್ರ ರಾಜ್ಯಕ್ಕೆ ಮತ್ತು ದೇಶಕ್ಕೆ ಅಚ್ಚ ದೀನ್ ಬರುತ್ತದೆ .
ರೈತರ ಮೇಲೆ , ಬಡವರ ಮೇಲೆ ಪ್ರಮಾಣ ಮಾಡುವ ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು , ಕೂಡಲೇ ಗಾಮ ಲೆಕ್ಕಿಗ , ರಾಜಸ್ಥ ನಿರೀಕ್ಷಕರು , ಸರ್ಕಾರಕ್ಕೆ ನೀಡಿರುವ ವಾರ್ಷಿಕ ಆದಾಯದ ಪ್ರಮಾಣ ಪತ್ರಗಳು ಸುಮಾರು ಬಡವರಿಗೆ ಲಕ್ಷ 50 ಸಾವಿರದಿಂದ 2 ಲಕ್ಷದವರೆಗೂ ಮನೆಗಳ ಮತ್ತು ಸ್ಥಳಗಳ ಪರಿಶೀಲನೆ ಮಾಡದೇ ಯಾರೋ ಒಬ್ಬ ಗ್ರಾಮ ಸಹಾಯಕ ತಮ್ಮ ಕಛೇರಿಗಳಲ್ಲಿ ಕುಳಿತುಕೊಂಡು ಅವರು ನೀಡಿರುವ ಆಧಾರ ಮತ್ತು ಹೇಳಿಕೆ ಮೇರೆಗೆ ಬಡವರ ರೇಷನ್ ಕಾರ್ಡ್ಗಳು ರದ್ದಾಗಲು ಕಾರಣವಾಗಿರುತ್ತಾರೆ.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣ , ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಆಗ್ರಹಿಸಿದ್ದಾರೆ . ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ , ಅಮರೇಶ್ ಮಾತನಾಡಿ , ಮಾನ್ಯ ದಂಡಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ತಮ್ಮ ಸಹ ಅಧಿಕಾರಿಗಳೊಂದಿಗೆ , ಇಂದಿನಿಂದಲೇ ವಾರ್ಷಿಕ ಆದಾಯ ಪ್ರಮಾಣ ಪತ್ರ ನೀಡಿರುವ ಬಡವರ ಮನೆ ಮನೆ ಸ್ಥಳ ಪರಿಶೀಲನೆ ಮಾಡಿ , ಅನ್ಯಾಯವಾಗಿರುವ ಪಡಿತರ ಕಾರ್ಡಗಳನ್ನು ಕೂಡಲೇ ಮುಂಬರುವ ತಿಂಗಳಲ್ಲಿ ರೇಷನ್ ನೀಡುವ ಕೆಲಸ ಕಾರ್ಯ ನಡೆಯಬೇಕು.
ರೇಷನ್ ಕಾರ್ಡ್ಗಳ ರದ್ದಾಗಿರುವ ಫಲಾನುಭವಿಗಳ ಸಮೇತ ತಮ್ಮ ಕಛೇರಿಯಲ್ಲಿ ವಿಭಿನ್ನವಾಗಿ ಧರಣಿ ಕೂರಿ , ಕಛೇರಿಯಲ್ಲಿ ಆಹಾರ ಬೇಯಿಸಿಕೊಂಡು , ಕಛೇರಿಯಲ್ಲಿ ಉಳಿದುಕೊಳ್ಳುವಂತಹ ಕಾರ್ಯವನ್ನು ಕರ್ನಾಟಕ ರಾಜ್ಯ ರೈತಸಂಘದಿಂದ ಘೋಷಣೆ ಮಾಡಲು ಸಿದ್ಧವಿದ್ದೇವೆ ‘ ಎಂದು ಒತ್ತಾಯಿಸಲಾಗಿದೆ . ಹಾಗೂ ಈ ಮೇಲ್ಕಂಡ ಸಂಬಂಧಿಸಿದಂತೆ ತಾವುಗಳು ಕೂಡಲೇ ಕಾನೂನು ಕ್ರಮ ಕೈಗೊಂಡು , ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸಲಾಗುತ್ತಿದೆ .
ಈ ಸಂದರ್ಭದಲ್ಲಿ ಬ.ತಾ.ಅಧ್ಯಕ್ಷ ಐತಾಂಡಹಳ್ಳಿ ಅಮರೇಶ್ , ತಾ.ಪ್ರಧಾನ ಕಾರ್ಯದರ್ಶಿ ರಾಜಶೇಖರ್ , ಕೋಲಾರ ತಾಲ್ಲೂಕು ಅಧ್ಯಕ್ಷ ಕೆಂಬೋಡಿ ರವಿ , ಮಹಿಳಾ ತಾ.ಅಧ್ಯಕ್ಷೆ ಮಾಗೊಂದಿ ರತ್ನಮ್ಮ , ಅ.ಸ.ತಾ.ಅಧ್ಯಕ್ಷ ಮುಜಾಮಿಲ್ , ಅ.ಸ.ಜಿಲ್ಲಾಧ್ಯಕ್ಷ ಎಂ.ಡಿ.ಬೃಹಾದ್ದೀನ್ , ಮುಳಬಾಗಿಲು ತಾ.ಸಂಚಾಲಕ ನಲ್ಲಂಡ್ಲಹಳ್ಳಿ ಯಲ್ಲೇಶ್ , ತಾ.ಗೌರವಾಧ್ಯಕ್ಷ ಬಾವರಹಳ್ಳಿ ಕೃಷ್ಣಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಗಲ್ ವೆಂಕಟೇಶ್ , ಸಿಬ್ಬತ್ತುಲ್ಲುಖಾನ್ , ಮುಜೀಬ್ , ಮುಹೀಸ್ , ದೊಡ್ಡಪ್ಪ , ನಾಯಕರಹಳ್ಳಿ ವೆಂಕಟೇಶಪ್ಪ , ಬದುಸಾ , ಶಕೀರಾಬೇಗಂ , ಶಹತಾಜ್ , ಸುಲ್ತಾನ್ಬೇಗಂ , ಅಸ್ಮಬೇಗಂ , ಫರ್ವಿನ್ತಾಜ್ , ಸುಮಯಾ ಅನಜಂ ಕೌಸರ್ಖಾಜ್ , ನವೀದ್ ಮುಜಾಹಿದ್ , ರೈಸ್ ಅಹ್ಮದ್ , ಇಮ್ರಾನ್ , ಜಮೀರ್ಪಾಷ , ಅಮೃದ್ , ಹಾಗೂ ಮುಂತಾದವರು ಭಾಗವಹಿಸಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.