ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್):ತಾಲ್ಲೂಕಿನ ಅಂಚೆಪಲ್ಲಿ ಗ್ರಾಮದ ಚೌಡೇಶ್ವರಿ ದೇವಾಲಯ ಜೀಣೋದ್ಧಾರಕ್ಕೆ ಹಾಗೂ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಮಾಜ ಸೇವಕ ಗುಂಜೂರು ಆರ್ . ಶ್ರೀನಿವಾಸರೆಡ್ಡಿ ತಿಳಿಸಿದರು .
ತಾಲ್ಲೂಕಿನ ಯಲ್ಲೂರು ಹೋಬಳಿ , ಆಚಂಪಲ್ಲಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ದೀಪಯೋತ್ಸವ ಕಾರ್ಯಕ್ರಮವನ್ನು ಮಾಡಲಾಗಿತ್ತು . ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀನಿವಾಸರೆಡ್ಡಿ ಈಗಾಗಲೇ ತಾಲ್ಲೂಕಿನಲ್ಲಿ ನನ್ನ ಕೈಯಾದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ . ಜೊತೆಗೆ ಕಷ್ಟದಲ್ಲಿ ಇದ್ದವರಿಗೆ ನೇರವಾಗುವ ಕೆಲಸ ಮಾಡಿದ್ದೇನೆ .
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ವಾರ್ಡ್ ನೂರಾನಿ ಮಸೀದಿ ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ನೇರವನ್ನು ಒದಗಿಸಿದ್ದೇನೆ . ಅಚಂಪಲ್ಲಿ ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ಧಿಗೆ ಹಣಕಾಸಿನ ನೇರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು . ಗ್ರಾಮದಲ್ಲಿ ಎಲ್ಲರೂ ಸೇರಿ ದೇವರಿಗೆ ದೀಪೋತ್ಸವನ್ನು ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ . ದೇವರು ದಯದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೆರೆಗಳು ತುಂಬಿವೆ . ರೈತರಿಗೆ ಅನುಕೂಲವಾಗಲಿದೆ ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತೇನೆ . ನಿಮ್ಮ ಸಹಕಾರ ನನಗೆ ನೀಡಬೇಕೆಂದು ಕೋರುತ್ತಾ ನಿಮ್ಮಜೊತೆ ಮುಂದಿನ ದಿನಗಳಲ್ಲಿ ಸದಾ ಇರುತ್ತೇನೆ ಎಂದ ಇವರು ಮುಂಬರುವ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು .
ವಕೀಲ ಅಚಂಪಲ್ಲಿ ಜಯರಾಮ್ಗೌಡ ಮಾತನಾಡಿ ಚೌಡೇಶ್ವರ ದೇವಾಲಯವು ಪುರಾತನ ದೇವಾಲವಾಗಿದ್ದು , ಇಂದು ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದೇವೆ . ಸುಮಾರು 15 ವರ್ಷಗಳಿಂದ ನಮ್ಮ ಕರೆಯು ತುಂಬಿಲ್ಲ . ಮಳೆಯ ಕಾರಣದಿಂದ ನಮ್ಮ ಆಚಂಪಲ್ಲಿ ಗ್ರಾಮದ ಕೆರೆ ತುಂಬಿದ್ದು ನಮಗೆ ಸಂತಸವಾಗಿದೆ . ಈ ಕೆರೆಯು ಸುಮಾರು 7 ಹಳ್ಳಿಗಳಿಗೆ ಸಂಬಂಧಪಟ್ಟ ಕೆರೆಯಾಗಿದ್ದು ಇಂದು ಇದಕ್ಕೆ ಪೂಜೆಯನ್ನು ಸಲ್ಲಿಸಿ ದೇವಿಗೆ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು .
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ್ರೆಡ್ಡಿ , ಉನಿಕಿಲಿ ಬೈರಪ್ಪ , ಶ್ರೀರಾಮ್ , ಸುನೀಲ್ , ಶಂಷೀರ್ , ಅಚಂಪಲ್ಲಿ ಗ್ರಾಮಸ್ಥರಾದ ವೆಂಕಟರವಣಪ್ಪ , ಶ್ಯಾಮ್ಸಿಂಗ್ , ಅರ್ಚಕ ಸೋಮಪ್ಪ , ಶಂಕರಪ್ಪ , ಹೆಚ್ , ರಡ್ಡೆಪ್ಪ , ಎಲ್ , ಎಂ , ಮುನಿಕೃಷ್ಣಗೌಡ , ಮಂಜುನಾಥ್ , ಗಾಮಸ್ಥರು ಭಾಗವಹಿಸಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.