ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರಸ್ತೆಹದಿ-ಬದಿಯಲ್ಲಿರುವ ಅಸಹಾಯಕರಿಗೆ, ಹಸಿದವರಿಗೆ ಅನ್ನ-ನೀರು ನೀಡುವ 34 ನೇ ವಾರದ ಕಾರ್ಯವನ್ನು ಮಾಡಲಾಯಿತು.
ಈ ಒಂದು ಕಾರ್ಯದಲ್ಲಿ ಸ್ಪರ್ಧಾ ಮೈತ್ರಿ ಅಕಾಡೆಮಿಯ ಆಡಾಳಿತಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಮಾದನಹಟ್ಟಿ ಮಹೇಶ್ ರವರು ಮಾತನಾಡುತ್ತಾ “ಎಲ್ಲಾ ದಾನಗಳಲ್ಲಿಯೂ ಅತಿ ಹೆಚ್ಚು ಪವಿತ್ರವಾದ ದಾನ ಹಸಿವಿನ ದಾಹವನ್ನು ನಿಗಿಸುವ ಮೂಲಕ ಬಡವರ, ಅಸಹಾಯಕರ ನೋವಿಗೆ, ಕಷ್ಟಕ್ಕೆ ಸ್ಪಂದಿಸುವುದೇ ಆಗಿದೆ, ಆ ಹಾದಿಯಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ ಬಹಳ ಉತ್ತಮವಾದ ಕಾರ್ಯಗಳನ್ನು ಅದರಲ್ಲೂ ರಕ್ತದಾನ, ನೇತ್ರದಾನದ ಸೇವೆಯನ್ನು ಮಾಡುತ್ತಾ, ಕನ್ನಡ ನಾಡು-ನುಡಿಯ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತು ನೂರಾರು ಯುವ ಉತ್ಸಾಹಿಗಳ ನಡುವೆ ಈ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ವಿಚಾರ, ಪ್ರತಿಯೋಬ್ಬರು ಸಹ ವಿ.ಕೆ.ಎಫ್ ಮಾಡುತ್ತಿರುವ ಅನ್ನ-ನೀರು ನೀಡುವ ಕಾರ್ಯಕ್ಕೆ ಸಹಾಯ ಮಾಡಿ ಸಹಕರಿಸಿ” ಎಂದರು.
ಇದೇ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ ರವರು “ಮನುಷ್ಯ ಜೀವನದಲ್ಲಿ ಅನೇಕ ಕಷ್ಟಗಳ ಮೂಲಕ ಬೆಳಕಿಗೆ ಬರುತ್ತಾನೆ, ಆ ಹಾದಿಯಲ್ಲಿ ಮನುಷ್ಯನ ಹಸಿವು ಬದುಕಿನ ಹಲವು ಆಯಾಮಗಳಲ್ಲಿ ಕಷ್ಟದ ಕಡೆ ಕರೆದುಕೊಂಡು ಹೋಗುತ್ತದೆ. ನಾವು ಮಾಡುವ ಉತ್ತಮ ಸೇವೆ ಸದಾ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಇಂದು ವಿ.ಕೆ.ಎಫ್ ಬಹಳ ಉತ್ತಮ ಕೆಲಸಗಳನ್ನು ಸಮಾಜಮುಖಿಯಾಗಿ ಮಾಡುತ್ತಿರುವುದು ನಿಮಗೆ ತಿಳಿದಿದೆ. ಈ ಕಾರ್ಯಗಳಿಗೆ ಎಲ್ಲಾರೂ ಕೈ ಜೋಡಿಸಿ” ಎಂದರು.
ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ವಿ.ಕೆ.ಎಫ್ ಸರಿಸುಮಾರು ಆರು ವರ್ಷಗಳಿಂದ ಸಮಾಜದಲ್ಲಿನ ಬಡವರ ಸೇವೆ ಮಾಡುತ್ತಾ, ಆಪತ್ತಿನಲ್ಲಿರುವ ರೋಗಿಗಳಿಗೆ ನೇರ ರಕ್ತದಾನಿ ಕಳುಹಿಸಿ ರಕ್ತದಾನ ಮಾಡಿಸುತ್ತಾ, ಬೆಳಕು ಕಾಣದೇ ಕತ್ತಲಿನ ಕೂಪದಲ್ಲಿರುವವರಿಗೆ ಬೆಳಕು ನೀಡುವ ಕಾರ್ಯಮಾಡುತ್ತಾ, ಸದಾ ಹಸಿದವರಿಗೆ ಊಟ ನೀಡುತ್ತಾ, ಸಾಂಸ್ಕ್ರತಿಕವಾಗಿ ಮಕ್ಕಳ ಪ್ರತಿಭೆಗಳನ್ನು ಗುರ್ತಿಸಿ, ಪ್ರೋತ್ಸಾಹಿಸುತ್ತಿರುವ ವಿ.ಕೆ.ಎಫ್ ಬೆಂಬಲಿಸಿ, ಪ್ರೋತ್ಸಾಹಿಸಿ” ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.