ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ಶ್ವೇತಾಂಜಲಿ ಭರತನಾಟ್ಯ ಶಾಲೆಯ ವತಿಯಿಂದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ರವರ ಹಾಗೂ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆಯ ನಾಯಕಿಯಾದ ಕುಮಾರಿ ಜಯಶ್ರೀ.ಎಸ್ ನೀರು ಕುಡಿಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಮಕ್ಕಳ ದಿನಾಚರಣೆಯ ಸಂದರ್ಭವನ್ನು ಇಡೀ ದೇಶ ಪೂರ್ತಿ ಎಲ್ಲಾ ಕಡೆ ಆಚರಿಸಲಾಗುತ್ತದೆ. ಜವಾಹರ್ ನೆಹರು ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ನಾವೆಲ್ಲರೂ ಮಕ್ಕಳನ್ನು ಪ್ರೀತಿಸೋಣಾ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಮಾರಿ ಗಾನವಿ ಮಾತನಾಡುತ್ತಾ “ಜವಾಹರ್ ಲಾಲ್ ನೆಹರು ರವರನ್ನು ಮಕ್ಕಳು ಪ್ರೀತಿಯಿಂದ ” ಚಾಚಾ ” ಎಂದು ಕರೆಯುತ್ತಿದ್ದರು. ನಾವು ಕಂಡಂತಹ ಸ್ವಾತಂತ್ರ್ಯ ನಂತರದ ರಾಷ್ಟ್ರ ನಾಯಕರಲ್ಲಿ ಮಕ್ಕಳ ಜೊತೆಗೆ ಅತಿ ಹೆಚ್ಚು ಪ್ರೀತಿಯ ಭಾಂದವ್ಯವನ್ನು ಹೊಂದಿದ್ದವರು ಎಂದರೆ ಅದು ನಮ್ಮ ನೆಹರು ಮಾತ್ರ” ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಿ ಮಕ್ಕಳಿಗೆ ಬಹುಮಾನ, ಸಿಹಿ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಲಿಖಿತಾ. ಪ್ರಾರ್ಥನೆಯನ್ನು ವಿದ್ಯಾ, ಭಾಷಣವನ್ನು ಉಷಾ, ಅದ್ವೀಕ ವಿಜೇತಾ, ಮಾತನಾಡಿದರು.
ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ಲಕ್ಕೂರು ಎಂ.ನಾಗರಾಜ್, ಲಕ್ಷ್ಮೀ, ಧೃತಿ, ಆರ್ಚನ, ದುರ್ಗಾ, ನವನೀತ, ಅಮೃತ, ತೇಜಶ್ರೀ, ಸಿರಿ, ಧನುಶ್ರೀ, ಪ್ರತೀಕ್ಷಾ, ಹರ್ಷಿತ, ವಿದ್ಯಾ, ದ್ರಾಕ್ಷಯಿಣಿ, ಹನ್ಸಿಕಾ, ಪ್ರೇರಣ, ಹಾರಿಕಾ, ತ್ರೀಷಾ, ಇಂದುಶ್ರೀ, ಗೀತನ್ವೀತಾ, ಗೌಷಲ್ಯ, ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.