(www.vknews.com) ; ಒಂದಾನೊಂದು ಊರಲ್ಲಿ ಒಂದು ದೊಡ್ಡ ಕಾಡು ಆ ಕಾಡಿನಲ್ಲಿ ಎಲ್ಲಾ ವಿಧದ ಪ್ರಾಣಿಗಳು ಬದುಕುತ್ತಿತ್ತು ಅದರಲ್ಲಿ ಹುಲಿ ಸಿಂಹ ಚಿರತೆಗಳು ಹೆಚ್ಚಾಗಿದ್ದವು ತೋಳಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಇತ್ತು ಆದರೆ ಅತಿಯಾದ ಬುದ್ಧಿವಂತಿಕೆಯಿಂದ ಅದು ಕಾಡಿನ ಅಧಿಕಾರದ ಚುಕ್ಕಾಣಿ ಹಿಡಿದಿತ್ತು
ಹಲವಾರು ವರ್ಷಗಳಿಂದ ಹುಲಿ ಸಿಂಹ ಚಿರತೆ ಗಳನ್ನು ಮೂರ್ಖರನ್ನಾಗಿ ಮಾಡಿ ರಾಜರಂತೆ ಬದುಕಬೇಕಾಗಿದ್ದ ವರನ್ನ ಗುಲಾಮರಾಗಿ ಬದುಕುವಂತೆ ಮಾಡಿ ಉಪಾಯದಿಂದ ತಮಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿತ್ತು
ಆದರೆ ತೋಳಗಳಿಗೆ ಒಳಗೊಳಗೆ ಭಯವು ಹಾಡುತ್ತಿತ್ತು ಎಷ್ಟಾದರೂ ಹುಲಿ ಸಿಂಹ ಚಿರತೆ ಗಳಲ್ಲವೇ ತಾವು ಮಾಡುವ ಹಿಪ್ನೋಟೈಸ್ ನಿಂದ ಹೊರಗೆ ಬಂದು ತಮ್ಮ ಮೆದುಳು ಗಳಿಗೆ ಕೆಲಸ ಕೊಟ್ಟರೆ ನಾವುಗಳು ಯಾರು ಎಂಬುವುದನ್ನು ಅರಿತು ನಮ್ಮ ಮೇಲೆ ದಾಳಿ ಮಾಡಿದರೆ ನಾವು ಸರ್ವನಾಶ ಆಗುತ್ತೇವೆ ಎಂಬ ಭಯವೂ ಅದಕ್ಕೆ ಎಂದು ಕಾಡುತ್ತಲೇ ಇತ್ತುಆದ್ದರಿಂದ ಅವರು ಒಂದು ವಾಮಾ ಮಾರ್ಗವನ್ನು ಉಪಯೋಗಿಸಿಕೊಂಡು ನಮಗೆ ದೇವರು ಒಲಿದಿದ್ದಾರೆ ನಾವು ದೇವರೊಂದಿಗೆ ಮಾತನಾಡುತ್ತೇವೆ ನಮಗೆ ದೈವಿಕ ಶಕ್ತಿ ಇದೆ ಎಂದೆಲ್ಲಾ ಬೊಗಳೆ ಬಿಟ್ಟು ಹುಲಿ ಸಿಂಹ ಚಿರತೆ ಗಳನ್ನೆಲ್ಲ ಮೂರ್ಖರನ್ನಾಗಿ ಮಾಡಿ ಅವರನ್ನು ಉಳಿದ ಪ್ರಾಣಿಗಳ ಮೇಲೆ ದಾಳಿ ಮಾಡುವಂತೆ ಮಾಡಿ ಅವರು ದಾಳಿ ಮಾಡಿದ ಆಹಾರದಿಂದ ತಿಂದು ತೇಗಿ ಬೀಗುತ್ತಿತ್ತು.ಆದರೆ ಒಂದು ವಿಧದ ಪ್ರಾಣಿಯನ್ನು ಮಾತ್ರ ಅದು ತಿನ್ನುವಂತೆ ಇರಲಿಲ್ಲ ಕಾರಣ ಇದು ದೈವಿಕ ಶಕ್ತಿ ಇದೆ ಎಂದು ಬಿಂಬಿಸಿ ಕೊಂಡದ್ದೆ ಆ ಪ್ರಾಣಿಯಿಂದ ಆಗಿತ್ತು.
ಆದರೆ ಆ ಪ್ರಾಣಿಯನ್ನು ಹುಲಿ ಸಿಂಹ ಚಿರತೆಗಳು ಯಥೇಚ್ಛವಾಗಿ ತಿನ್ನುತ್ತಿತ್ತು ಅದು ಸ್ವಲ್ಪ ದೊಡ್ಡ ಗಾತ್ರದ ಪ್ರಾಣಿ ಯಾಗಿರುವುದರಿಂದ ಅದನ್ನು ಹಂಚಿಕೊಂಡು ತಿನ್ನುವುದು ಸಾಕಾಗುವಷ್ಟು ತೃಪ್ತಿಯಿಂದ ತಿಂದು ಹೊಟ್ಟೆ ತುಂಬಿದ ನಂತರ ದಿನವಿಡಿ ಶಿಕಾರಿಗೆ ಹೋಗಬೇಕಾದ ಅವಶ್ಯಕತೆ ಇಲ್ಲದಿರುವುದರಿಂದ ಮಾತುಕತೆ ಮೋಜು ಮಸ್ತಿಯಿಂದ ಬದುಕುತ್ತಿದ್ದವು ಕೆಲವೊಂದು ಅದನ್ನು ತಿನ್ನುವುದೇ ರೂಢಿ ಮಾಡಿಕೊಂಡಿದ್ದವು ಇದನ್ನು ಅರಿತ ವಕ್ರ ಬುದ್ಧಿಯ ತೋಳಗಳು ಹೇಗಾದರೂ ಮಾಡಿ ಇದರ ಸದುಪಯೋಗ ಪಡೆದು ಇವರುಗಳನ್ನು ಅದನ್ನು ತಿನ್ನದಂತೆ ಯು ಮಾಡಬೇಕು ಹಾಗೂ ಅದೇ ನಾನು ಉಪಯೋಗಿಸಿಕೊಂಡು ಇವರ ಸೌಹಾರ್ದತೆಯನ್ನು ತಪ್ಪಿಸಿ ಇವರುಗಳು ಶಾಶ್ವತವಾಗಿ ಕಿತ್ತಾಡುವಂತೆ ಮಾಡಬೇಕು ಎಂದುಕೊಂಡು ಒಂದು ಕುತಂತ್ರವನ್ನು ರೂಪಿಸಿ ಅದರಲ್ಲಿ ಜಯವನ್ನು ಸಫಲಗೊಂಡಿತು.
ಅಂದಿನಿಂದ ಆ ಕಾಡಿನಲ್ಲಿ ಹುಲಿ ಸಿಂಹ ಚಿರತೆ ಗಳಲ್ಲಿ ಬಣಗಳು ಉಂಟಾಗಿ ತಮ್ಮತಮ್ಮಲ್ಲಿ ಕಚ್ಚಾಡುತ್ತಾ ಹೊಡೆದಾಡುತ್ತಾರೆ ಬಡಿದಾಡುತ್ತಾ ಒಬ್ಬರನ್ನೊಬ್ಬರು ಕೊಲ್ಲುತ್ತಾ ತನ್ನ ಮೂರ್ಖ ಬುದ್ಧಿಯಿಂದ ತಮಗೆ ಸಿಗಬೇಕಾದ ಅಧಿಕಾರವನ್ನು ತೋಳಗಳ ಕೈಗೆ ಕೊಟ್ಟು ಗುಲಾಮರಂತೆ ಜೀವನ ಸಾಗಿಸಲು ತೊಡಗಿತು.
ಮನ್ಸೂರ್ ಅಹ್ಮದ್ ಕೌಡಳ್ಳಿ, ಯುವ ಸಾಹಿತಿ ರಾಷ್ಟ್ರಪ್ರಶಸ್ತಿ ವಿಜೇತ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.