(www vknews.com) ; ಪ್ರತಿಭಟನೆಗಾರರು ಹೋರಾಟಗಾರರು ನ್ಯಾಯಕ್ಕಾಗಿ ಧ್ವನಿಯೆತ್ತುವವರು ರೈತರನ್ನು ಮಾದರಿಯಾಗಿ ಮಾಡಬೇಕಾಗಿದೆ.
ಒಂದು ವೇಳೆ ವಿವಾದಾತ್ಮಕ ಕೃಷಿ ಮಸೂದೆ ಕಾಯ್ದೆ ಹಿಂತೆಗೆದ ವಾರ್ತೆ ವ್ಯಾಜವಾಗಿರಬಹುದು ಅಥವಾ ಮುಂಬರುವ 5 ರಾಜ್ಯಗಳ ಚುನಾವಣೆಯನ್ನು ಮುಂದಿಟ್ಟು ತಂದ ಚಾಣಕ್ಯ ತಂತ್ರ ವಾಗಿರಬಹುದು.
ಹಾಗಿದ್ದರೂ ಅವರ ಹೋರಾಟ ಒಂದು ವರ್ಷ ಮೂರು ತಿಂಗಳು ಒಂದು ವಾರ ಮತ್ತು ಮೂರು ದಿನಗಳು ಒಟ್ಟಿನಲ್ಲಿ 467 ದಿನಗಳ ನಂತರ 658 ವೀರ ಹುತಾತ್ಮರು ಗುರುತುಗಳಾಗಿ ಸ್ಪಷ್ಟವಾದಾಗ..
ಅವರ ಪ್ರತಿಭಟನೆ ರೀತಿಯನ್ನು ಪ್ರಾಯೋಗಿಕವಾಗಿ ಅನುಸರಿಸಬೇಕಾಗಿದೆ.ನಾವೆಲ್ಲಿ ಎಷ್ಟು ಹೋರಾಟಗಳನ್ನು ಮಾಡಿದ್ದೇವೆ?ಎಷ್ಟು ಸಫಲವಾಗಿ ಈಡೇರಿದೆ?ಯಾವ ಭಾರವಾದ ಶಬ್ದಗಳಿಗೆ ನಮಗೆ ನ್ಯಾಯ ಲಭಿಸಿದೆ?ಇಲ್ಲಿ ನಾವು ರೈತರ ಹೋರಾಟವನ್ನು ಮರು ಚಿಂತನೆ ಮಾಡಬೇಕಾಗಿದೆ.
ಇಂಧನ ಬೆಲೆ ವಿರುದ್ಧ ನಾವು ಎಷ್ಟು ಕಿರುಚಾಡಿದರು..ಎಷ್ಟು ಗೋಗರೆದರೂ ನಮ್ಮ ಮಾತಿಗೆ ಕಿವಿ ಕೊಟ್ಟರೇ..ನಮ್ಮ ಹೋರಾಟ ಕೇವಲ ಸ್ಟೇಟಸ್ ನಲ್ಲಿ ಮಾತ್ರವಾಗಿತ್ತು…ನೆನಪಿಲ್ಲ ತಾನೆ..ಒಂದು ಪೋಸ್ಟ್ ರೂಪದಲ್ಲಿ ನಾವು ಅದನ್ನು ಮರೆತುಬಿಟ್ಟೆವು!
ಸಬಿಯಾ ಸೋಫಿಯಾ ಎಷ್ಟು ಜನರಿಗೆ ನೆನಪಿದೆ?ಆದರೆ ಕಳೆದ ಸೆಪ್ಟೆಂಬರ್ ನಮ್ಮ ಎಲ್ಲಾ ವಾಟ್ಸಪ್ ಯುನಿವರ್ಸಿಟಿಯ ಸ್ಟೇಟಸ್ ಗಳಲ್ಲಿ, ಪೋಸ್ಟ್ನಲ್ಲಿ ಇದು ಗರಿಷ್ಠ ಒಂದು ದಿನ ಜಾರಿಯಲ್ಲಿತ್ತುಹೆಸರು ಸಬಿಯಾ ಸೀಫಿಯಾ ಇಂತಹ ಸಾಕಷ್ಟು ಹೆಸರುಗಳು..
ಆದರೆ ಅವರ ಮುಂದೆ ನ್ಯಾಯ ದೇವತೆಯ ಕಣ್ಣುಗಳು ತೆರೆದಿದೆಯೇ ಎಂದು ನಾವು ಪುನರ್ನ್ವೇಷಣೆ ಮಾಡಿದೆಯೇ ನಮ್ಮಲ್ಲಿ ಎಷ್ಟು ಮಂದಿ ನಂತರ ಅದರ ಬಗ್ಗೆ ಮಾತನಾಡಲಾಗಿದೆ ಅದರ ಬಗ್ಗೆ ತನಿಖೆ ನಡೆಸಲಾಗಿದೆ?
ನಮ್ಮ ನಿಲುವು ತೀಕ್ಷ್ಣವಾದ ಪ್ರತಿಭಟನೆಗಳು ಹೋರಾಟಗಳು ಇಲ್ಲದಿದ್ದರೆ ಮತ್ತೆ ಹೇಗೆ ನ್ಯಾಯವನ್ನು ನಿರಾಕರಿಸಿದವರಿಗೆ ಹಕ್ಕುಗಳು ಕಾಗದದಲ್ಲಿ ಮಾತ್ರ ಸ್ಥಾಪಿತವಾದವರಿಗೆ ನ್ಯಾಯ ಸಿಗುತ್ತದೆ ದೌರ್ಜನ್ಯಕ್ಕೊಳಪಟ್ಟ ಜನರಿಗೆ ಹೇಗೆ ನ್ಯಾಯ ಸಿಗುತ್ತೆ?
ನಾವು ಇಲ್ಲಿ ಇಷ್ಟು ದಿನ ಬೀದಿಯಲ್ಲಿದ್ದ ರೈತರು ಓದಬೇಕು ಹಕ್ಕುಗಳನ್ನು ಪಡೆದುಕೊಳ್ಳಲು ಅಧಿಕಾರಿಗಳ ಜಲಪಿರಂಗಿಗಳ ಮುಂದೆ ಲಾಟಿ ಏಟಿನ ಮುಂದೆ ಹಿಂಜರಿಯದೆ ನಿರ್ಭಯದ ದಾಪುಗಾಲಿಟ್ಟ ಈ ದೇಶದ ಬೆನ್ನೆಲುಬಾದ ಅನ್ನದಾತರು.
ಯಾರದ್ದೋ ಜೀವನವನ್ನು ಅಸ್ತವ್ಯಸ್ತ ಮಾಡುವ ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ತರುವ ಪ್ರತಿಭಟನೆಗಳಾಬಾರದು ನಮ್ಮದು ನಮ್ಮ ಪ್ರತಿಭಟನೆಗಳು ಅರ್ಧದಲ್ಲಿ ತಟಸ್ಥಗೊಳ್ಳದೆ ಮೌಲ್ಯಯುತ ನಿಲುವುಳ್ಳ ಹಕ್ಕುಗಳನ್ನು ದೊರಕಿಸಿಯೇ ಸಿದ್ದ ಎಂಬ ಛಲವುಳ್ಳ ರೈತರ ರೀತಿಯ ಪ್ರತಿಭಟನೆ ಯಾಗಬೇಕುಮುಂದಿನ ದಿನಗಳಲ್ಲಿ…
🖋️ಸಹದ್ ಕರ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.