(www.vknews.com) ; ಹರಪನಹಳ್ಳಿ ಕ್ಷೇತ್ರದ #ಮತ್ತಿಹಳ್ಳಿ ಗ್ರಾಮಕ್ಕೆ ಇಂದು ಮಳೆಯಿಂದ ಜಲಾವೃತವಾದ ಜಮೀನುಗಳಿಗೆ ಭೇಟಿನೀಡಿ, ರೈತರಿಗೆ ಧೈರ್ಯ ತುಂಬಿದ ನಂತರ ಗ್ರಾಮದಲ್ಲಿ ಸಂಚರಿಸುವಾಗ ಥಟ್ಟನೇ ತಮ್ಮ ಕಿವಿಗೆ ಬಿದ್ದ ಹಾರ್ಮೋನಿಯಂ ಶಬ್ಧವನ್ನು ಆಲಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ, ಕಲಾ ಪ್ರೋತ್ಸಾಹಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ ಪಿವೀಣಾ_ಮಹಾಂತೇಶ್ ಅವರು ಮತ್ತಿಹಳ್ಳಿಯ ಕಲಾವಿದರು #ಸಣ್ಣಾಟ (ದಪ್ಪಿನಾಟ) ತರಬೇತಿ ಪಡೆಯುತ್ತಿದ್ದ ಶ್ರೀ.ಪಂಪಾಚಾರ್ಯ ಅವರ ಮರಗೆಲಸ ಮಾಡುವ ಶೆಡ್ ಗೆ ಭೇಟಿಕೊಟ್ಟು ಅಲ್ಲಿ ತಬಲ, ಹಾರ್ಮೋನಿಯಂ, ಗಿಟಾರದ ಕಲೆಗೆ ಮಾರುಹೋದರು.ಈ ಸಂದರ್ಭದಲ್ಲಿ ನೆರೆದಿದ್ದ ಕಲಾವಿದರನ್ನು ಹುರಿದುಂಬಿಸಿ ಅವರಿಂದ ಸಂಗಾಬಾಳ್ಯಾ ನಾಟಕದ ಹಾಡುಗಳನ್ನು ಹಾಡಿಸಿ ಖುಷಿಪಟ್ಟರು.
ಕಲಾವಿದರೆಲ್ಲರೂ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದ, ನಾಡುಕಂಡ ಧೀಮಂತ ರಾಜಕಾರಣಿ, ಮಾಜಿ ಉಪ ಮುಖ್ಯಮಂತ್ರಿಗಳಾದ #ಎಂಪಿಪ್ರಕಾಶ್ ಹಾಗೂ ಸದಾ ಕಲೆ, ಕಲಾವಿದರಿಗೆ ಪ್ರೋತ್ಸಾಹ ತುಂಬಿ ಅವರಿಗೆ ತನು,ಮನ,ಧನ ಸಹಕಾರ ನೀಡುತ್ತಿದ್ದ ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ #ಎಂಪಿರವೀಂದ್ರ ಅವರನ್ನು ನೆನೆದು ಭಾವುಕರಾದರು. ಹಾಗೆಯೇ ಅವರು ತಮ್ಮಿಂದ ಆಡಿಸುತ್ತಿದ್ದ ನಾಟಕಗಳನ್ನು ನೆನೆದು ಸ್ಮರಿಸಿದರು.
ನಮ್ಮ ತಂದೆ ಹಾಗೂ ರವಿಯಣ್ಣನ ದಾರಿಯಲ್ಲಿಯೇ ನಾನು ಸಾಗುತ್ತಿದ್ದು, ಮುಂದೆ ನಿಮ್ಮ ಕಲೆಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನನ್ನದು, ಮುಂದಿನ ದಿನಗಳಲ್ಲಿ ನಿಮ್ಮ ತಂಡದಿಂದ ನಾಟಕ ಪ್ರದರ್ಶನ ನಡೆಸಲು ಕಾತುರಳಾಗಿದ್ದೇನೆ ಎಂದು ವೀಣಕ್ಕ ಭರವಸೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.