ಪುತ್ತೂರು (www.vknews.com) : ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಗಲಭೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು SKSSF ಪುತ್ತೂರು ವಲಯ ಸಮಿತಿ ಆಗ್ರಹಿಸಿದೆ.
ವಿಧ್ಯಾರ್ಥಿಗಳಲ್ಲಿ ಶಾಂತಿ, ಸಹೋದರತೆ, ಭಾವೈಕ್ಯತೆಯನ್ನು ಬೆಳೆಸಬೇಕಾದ ಕಾಲೇಜು ಕ್ಯಾಂಪಸ್ ಗಳೇ ಗೊಂದಲದ ಗೂಡಾಗಿ ಮಾರ್ಪಟ್ಟರೆ ಮುಂದಿನ ಪೀಳಿಗೆಯ ಭವಿಷ್ಯ ಅಪಾಯಕಾರಿಯಾಗಲಿದೆ… ಜಾತಿ, ಧರ್ಮ, ಭೇದಭಾವ ವ್ಯತ್ಯಾಸ ವಿಲ್ಲದೆ ಸಹಬಾಳ್ವೆಯಿಂದ ವರ್ತಿಸುತ್ತಿದ್ದ ವಿಧ್ಯಾರ್ಥಿಗಳು ಧರ್ಮದ ಆಧಾರದಲ್ಲಿ ವಿಭಜಿಸಲ್ಪಟ್ಟು ಪರಸ್ಪರ ಕಚ್ಚಾಡುತ್ತಿರುವುದು ಖೇದಕರವಾಗಿದೆ… ಹೊರಗಿನ ದುಷ್ಟಶಕ್ತಿಗಳ ಕೈವಾಡ ಎದ್ದು ಕಾಣುತ್ತಿದೆ. ಆದ್ದರಿಂದ ಪೋಲೀಸ್ ಇಲಾಖೆ , ಶಾಲಾ ಆಡಳಿತ ಸಮಿತಿ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದರ ಮೂಲಕ ವಿದ್ಯಾಕೇಂದ್ರಗಳ ಪವಿತ್ರತೆಯನ್ನು ಕಾಪಾಡಬೇಕೆಂದು SKSSF ಪುತ್ತೂರು ವಲಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.