ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್) : ಕಾಂಗ್ರೆಸ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾಡಿರುವ ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾಗಿವೆ ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪುರಸಭಾ ಜೆಡಿಎಸ್ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ , ‘ ಪುರಸಭೆ ಕಾಚೇರಿಯ ದಕ್ಷಿಣ ಭಾಗದಲ್ಲಿರುವ 4 ಮಳಿಗೆಗಳಿಗೆ ಖಾಲಿ ಜಾಗ ವಿಸ್ತರಿಸಿ ಕೊಡಲು ರೂ .24 ಲಕ್ಷ ಲಂಚ ಪಡೆದಿರುವುದಾಗಿ ಶ್ರೀನಿವಾಸನ್ ಮಾಡಿರುವ ಆಪಾದನೆಯಲ್ಲಿ ಹುರುಳಿಲ್ಲ .
ಮಳಿಗೆ ಗೋಡೆ ನಿರ್ಮಿಸಲು ಅನುಮೋದನೆ ಪಡೆದಿಲ್ಲ ಎಂಬುದೂ ಸುಳ್ಳು ಎಂದು ಹೇಳಿದರು ಅ .10 ರಂದು ಏರ್ಪಡಿಸಲಾಗಿದ್ದ ಪುರಸಭೆ ಸದಸ್ಯರ ವಿಶೇಷ ಸಭೆಯಲ್ಲಿ ಆ ಬಗ್ಗೆ ಚರ್ಚೆ ನಡೆಸಿ , ಆ ಸ್ಥಳದಲ್ಲಿ ಗೋಡೆ ಮತ್ತು ಕಾಲುವೆ ನಿರ್ಮಿಸುವ ಅಗತ್ಯವಿದ್ದು , ನಿರ್ಮಾಣ ಕಾರ್ಯ ಮುಗಿದ ಬಳಿಕ ಈಗಾಗಲೆ ಇರುವ ಪುರಸಭೆ ಮಳಿಗೆಗಳಿಗೆ ಸೇರಿಸಿ ,ಎಸ್ಆರ್ ದರದಂತೆ ಮುಂಗಡ ಹಣ ಹಾಗೂ ಬಾಡಿಗೆ ಹೆಚ್ಚಿಸಿ ಪುರಸಭೆಗೆ ಆದಾಯ ಬರುವಂತೆ ಮಾಡಲು ತೀರ್ಮಾನಿಸಲಾಗಿತ್ತು . ಎಂದು ಹೇಳಿದರು .
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ವೈದ್ಯರೊಬ್ಬರಿಂದ ರೂ .5 ಲಕ್ಷ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದು , ಜೈಲು ಸೇರಿದ್ದ ಎಂ.ಶ್ರೀನಿವಾಸನ್ ಅವರಿಂದ ನಾನು ಪಾಠ ಕಲಿಯಬೇಕಾಗಿಲ್ಲ . ದಲಿತ ಮುಖಂಡ ಎಂದು ಹೇಳಿಕೊಳ್ಳುವ ಅವರು , ದಲಿತ ಮಹಿಳೆಯೊಬ್ಬರು ಪುರಸಭಾಧ್ಯಕ್ಷೆಯಾಗಿ ಕಾರ್ಯನಿರ್ವ ಹಿಸುವುದನ್ನು ಸಹಿಸುತ್ತಿಲ್ಲ ಎಂದು ಹೇಳಿದರು .
ಎಂ.ಶ್ರೀನಿವಾಸನ್ ಅವರು ಪಟ್ಟಣ ಹಾಗೂ ಪಟ್ಟಣದ ಹೊರ ವಲಯದಲ್ಲಿ ನಡೆಸಿರುವ ಜಮೀನು ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು . ಸಭೆಯಲ್ಲಿ ಮುಖಂಡರಾದ ಏಜಾಜ್ ಪಾಷ , ರವಿ , ಮಾತನಾಡಿದರು .
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ , ಸದಸ್ಯರಾದ ಜಯಲಕ್ಷ್ಮಿ , ಅದ್ದೂರು ರಾಜು , ಆನಂದ್ , ಜಯಲಕ್ಷ್ಮಿ , ಸುನಿತಾ , ಬಿ.ವಿ.ರೆಡ್ಡಿ , ಮುಖಂಡರಾದ ರಸೂಲ್ ಪಾಷ , ರವಿ , ಜಗದೀಶ್ , ಸಂತೋಷ್ , ನಾಗೇಶ್ ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.