ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲಿರುವ ಅನಿವಾಸಿ ಭಾರತೀಯರಿಗೆ ತಣ್ಣೀರೆರಚಿದ ಸರಕಾರದ ನಿರ್ಧಾರ
ನವದೆಹಲಿ(www.vknews.in): ರೂಪಾಂತರಿತ ಕೊವಿಡ್ ಭೀತಿಯಿಂದಾಗಿ ಭಾರತ ಸರಕಾರವು ತನ್ನ ಅಂತರರಾಷ್ಟ್ರೀಯ ವಿಮಾನಯಾನದ ನಿಷೇಧವನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಿದೆ.
ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಡಿಸೆಂಬರ್ 1 ರ ನಂತರ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಉದ್ದೇಶಿಸಿರುವ ಅನಿವಾಸಿ ಭಾರತೀಯರಿಗೆ ನಿರಾಶೆಯಾಗಿದೆ. ಸೌದಿ ಸರಕಾರವು ಭಾರತೀಯರಿಗೆ ನೇರವಾಗಿ ಪ್ರಯಾಣಿಸಲು ಅನುಮತಿ ನೀಡಿದರೂ ಭಾರತ ಸರಕಾರದ ಈ ನಿರ್ಧಾರದಿಂದಾಗಿ ಸೌದಿಗೆ ಪ್ರಯಾಣಿಸಲಿರುವ ಅನಿವಾಸಿ ಭಾರತೀಯರು ಮತ್ತೊಮ್ಮೆ ಚಾರ್ಟರ್ಡ್ ವಿಮಾನವನ್ನು ಅವಲಂಭಿಸುವಂತಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.