ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಗೆಳೆಯನ ಕಷ್ಟಕ್ಕೆ ನೆರವಾಗೋಣ, ಕೈ ಜೋಡಿಸೋಣಾ ಎಂಬ ಪ್ರಮುಖ ಆಶಯದ ಹಾದಿಯಲ್ಲಿ ಮಾಲೂರಿನ ಪುರಸಭಾ ಸದಸ್ಯ ಭಾನುತೇಜಾ ರವರ ಮನವಿಗೆ ಮಾಲೂರಿನ ಸಮಾಜ ಸೇವಕ, ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್, ಮಾಜಿ ಸಚಿವರು ಹಾಗೂ ಶಾಸಕರಾದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಹಾಗೂ ಅನೇಕ ಮಂದಿ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿರುವುದು ಅಭಿನಂದನೀಯ.
ಪುರಸಭಾ ಸದಸ್ಯರಾದ ಭಾನುತೇಜಾ ರವರು ಮಾತನಾಡಿ “ಗೆಳೆಯ, ಮಾಲೂರಿನ ಅದ್ವಿತೀಯ ಕ್ರಿಕೆಟ್ ಪಟು ಹಾಗೂ ಸ್ನೇಹ ಜೀವಿ ಎಂ. ವಿ. ನಾಗರಾಜ್ ರವರು ರೆಮೈಟೆಡ್ ಆರ್ಥ್ರೈಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು 8 ಲಕ್ಷಕ್ಕೂ ಹೆಚ್ಚಿನ ಚಿಕಿತ್ಸೆಗೆ ಖರ್ಚಾಗುವುದರಿಂದ ಹಣಕಾಸಿನ ನೆರವು ಬೇಕಿದೆ. ಸ್ನೇಹಿತರಿಂದ ಪ್ರಯತ್ನ ಸಾಗುತ್ತಿದೆ.ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಸಾರ್ವಜನಿಕರು ಇವರ ಕಷ್ಟಕ್ಕೆ ಸ್ಪಂದಿಸಲು ಕಳಕಳಿಯಿಂದ ಪ್ರಾರ್ಥಿಸುತ್ತೇನೆ ಹಣಕಾಸಿನ ನೆರವು ನೀಡ ಬಯಸುವವರು ಈ ಕೆಳಗಿನ ಸಂಖ್ಯೆಗೆ ಫೋನ್ ಪೇ ಮಾಡಬಹುದು. ಜಯರಾಮ್. ವಿ : 9108172422ಪೋನ್ ಪೇ ” ಎಂದರು.
ಮಾಲೂರಿನ ಸಮಾಜ ಸೇವಕ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಚಿಕಿತ್ಸೆಗಾಗಿ 50.000 ಸಾವಿರ ರೂಗಳ ಧನ ಸಹಾಯ ಮಾಡುವ ಮಾನವೀಯ ಕಾರ್ಯ ಮಾಡಿದ್ದಾರೆ. ನಮ್ಮ ವಿ.ಕೆ.ನ್ಯೂಸ್ ಪತ್ರಿಕೆಯ ಕಳಕಳಿಯೂ ಸಹ ಒಂದೇ ಆಪತ್ತಿನಲ್ಲಿರುವ ಕ್ರಿಡಾಪಟು ನಾಗರಾಜ್ ರವರ ಮುಂದಿನ ಚಿಕಿತ್ಸೆಗೆ ರಾಜ್ಯದ ಜನತೆ ಸ್ಪಂದಿಸಲಿ ಎಂಬುದಾಗಿದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.